ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಮತ್ತೊಂದು ಗ್ರಹಣ – ಧಾರವಾಡ ಹೈಕೊರ್ಟ್ ಪೀಠದಿಂದ ನೊಟೀಸ್

Suddi Sante Desk

ಧಾರವಾಡ –

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಮತ್ತೊಂದು ಗ್ರಹಣ ಪಡೆದು ಕೊಂಡಿದೆ.ಹೌದು ಅವಳಿ ನಗರಗಳಲ್ಲಿ ಹೊಸದಾಗಿ ರಚನೆಯಾದ 82 ವಾರ್ಡ್ ಗಳಿಗಲ್ಲಿ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಸರಿಯಾದ ಮೀಸಲಾ ಯಿತಿಯನ್ನು ನೀಡಿಲ್ಲವೆಂದು ನ್ಯಾಯವಾದಿ ಬಸವ ರಾಜ ತೆರದಾಳ ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ದೂರನ್ನು ಸಲ್ಲಿಸಿದ್ದರು.

ಈ ಒಂದು ದೂರಿನ ಬೆನ್ನಲ್ಲೆ ಇತ್ತ ಧಾರವಾಡ ಹೈಕೊರ್ಟ್ ನಲ್ಲೂ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಇಂದು ಈ ಒಂದು ಮೀಸಲಾತಿ ವಿಚಾರದಲ್ಲಿ ರಾಜ್ಯ ಚುನಾವಣೆಯ ಆಯೋಗಕ್ಕೆ ನೊಟೀಸ್ ಜಾರಿ ಮಾಡಿದ್ದಾರೆ.

ಸಧ್ಯ ನೊಟೀಸ್ ಜಾರಿ ಮಾಡಿ ವಿಚಾರಣೆಯನ್ನು ಮತ್ತೆ ಮುಂದೂಡಿದ್ದಾರೆ. ಇನ್ನೂ ಪ್ರಮುಖವಾಗಿ ಎಲ್ಲವೂ ಮುಗಿಯಿತು ಇನ್ನೇನು ಚುನಾವಣೆ ದಿನಾಂಕ ಅಷ್ಟೇ ಘೋಷಣೆ ಎನ್ನುವಷ್ಟರಲ್ಲಿಯೇ ಮತ್ತೊಂದು ಸಮಸ್ಯೆಯಾಗಿದ್ದು ಅಂದುಕೊಂಡಂತೆ ಆಗಿದ್ದರೆ ಇನ್ನೇನು ಚುನಾವಣೆಯ ದಿನಾಂಕ ಘೋಷಣೆಗೆ ಎಲ್ಲರೂ ಕಾಯತಾ ಇದ್ದರು.

ಅರ್ಜಿ ಸಲ್ಲಿಸಿದ ವಕೀಲರು

ಆದರೆ ಪರಿಶಿಷ್ಟ ಸಮುದಾಯದವರು ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಗಿರುವ ಕುರಿತಂತೆ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದ ಸಧ್ಯ ನೊಟೀಸ್ ಜಾರಿ ಮಾಡಲಾಗಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.