ಕೊಟ್ಟ ಮಾತಿನಂತೆ ನಡೆದುಕೊಂಡ ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ ರಡ್ಡೇರ -ಮಾಡಿದ ಕೆಲಸ ನೋಡಿದರೆ ಖುಷಿ ಸಂತೋಷ ವಾಗುತ್ತದೆ…..

Suddi Sante Desk

ಹುಬ್ಬಳ್ಳಿ ಧಾರವಾಡ –

ಕೊಟ್ಟ ಮಾತಿನಂತೆ ರೈತರ ಅನುಕೂಲಕ್ಕಾಗಿ ಹೊಲಗಳಿಗೆ ಹೋಗುವ ರಸ್ತೆಗಳ ಅಭಿವೃದ್ಧಿ ಮಾಡಿ ಮಾತನ್ನು ಉಳಿ ಸಿಕೊಂಡಿದ್ದಾರೆ ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ ರಡ್ಡೇರ

ಅಲ್ಲಾಪೂರ ಗ್ರಾಮದ‌ ಸಾಪನ್ ಕೆರೆ ದಾರಿಯ ರಸ್ತೆಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 2,50,000 ಎರಡು ಲಕ್ಷ ಐವತ್ತು ಸಾವಿರ ರೂ ವೆಚ್ಚದಲ್ಲಿ ಕೆರೆ ನೀರು ಬರುವ ಕಾಲುವೆ ಹಾಗೂ ಹೊಲಕ್ಕೆ ಹೋಗುವ ರಸ್ತೆಯಲ್ಲಿ ಗಿಡ ಕಸ ಕಂಟಿಗಳನ್ನು ಸ್ವಚ್ಛಗೊಳಿಸಿ ರೈತರ ಹೊಲಗಳಿಗೆ ಹೋಗಲು
ರಸ್ತೆ ಅಭಿವೃದ್ಧಿ ಪಡಿಸಲು ಗುದ್ದಲಿ ಪೂಜೆಯನ್ನು ನೆರವೇರಿ ಸಲಾಯಿತು

ಈ ಸಂದರ್ಭದಲ್ಲಿ ಗ್ರಾಮದ ಗುರುಗಳಾದ ಚೆನ್ನಯ್ಯ ಹಿರೇ ಮಠ,ಹನುಮಂತಪ್ಪ ಮಸನಾಳ.ಗದಗಯ್ಯ ಕುರುವತ್ತಿ ಮಠ.ಆನಂದಪ್ಪ ಇಂಗಳಗಿ,ಮುತ್ತು ಮಸನಾಳ, ಕಲ್ಮೇಶ್ ಬಡಿಗೇರ, ಶಿವಾನಂದ ಉಣಕಲ್ ,ಮಹೇಶ್ ಗುರನಹಳ್ಳಿ ಮಹೇಶ್ ಉಮರಾಣಿ ‌,ಪರಶುರಾಮ ಹರಿಜನ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿ ಮತ್ತಿತರು ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.