ಧಾರವಾಡದಲ್ಲಿ ಬೈಕ್ ನಲ್ಲಿ ಹಾವು ಸಮಯ ಪ್ರಜ್ಞೆಯಿಂದ ತಪ್ಪಿತು ಅವಘಡ ಸುರಕ್ಷಿತವಾಗಿ ಹಾವು ಸೆರೆ…..

Suddi Sante Desk

ಧಾರವಾಡ –

ಬೈಕ್ ನಲ್ಲಿ ಹಾವೊಂದು ಅವಿತುಕೊಂಡು ನಂತರ ಅದನ್ನು ಸುರಕ್ಷಿತವಾಗಿ ಹಿಡಿದ ಘಟನೆ ಧಾರವಾಡದಲ್ಲಿ ಕಂಡು ಬಂದಿದೆ.ಹೌದು ನಗರದ ಹೊಸ ಯಲ್ಲಾಪೂರ ದಲ್ಲಿ ಈ ಒಂದು ಘಟನೆ ನಡೆದಿದ್ದು

ಎಂದಿನಂತೆ ರಾತ್ರಿ ಮನೆಯ ಮುಂದೆ ಬೈಕ್ ನ್ನು ನಿಲ್ಲಿಸಿ ದ್ದರು ಬೆಳಗಿನ ಜಾವ ಇನ್ನೇನು ಬೈಕ್ ತಗೆದುಕೊಂಡು ಕರ್ತವ್ಯಕ್ಕೆ ಹೊರಟಿದ್ದನು ದಾರಿ ಮಧ್ಯದಲ್ಲಿ ಬೈಕ್ ನಲ್ಲಿ ಹಾವು ಇರೊದು ಕಂಡು ಬಂದಿದೆ. ದಾರಿ ಮಧ್ಯದಲ್ಲಿಯೇ ಈ ಒಂದು ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ಜೆಕೆ ಸರ್ಕಾರ ಟೀಂ ಗೆ ಬೈಕ್ ಸವಾರ ತಿಳಿಸಿದ್ದು

ಕೂಡಲೇ ಸ್ಥಳಕ್ಕೇ ತೆರಳಿದ ಜಿಲಾನಿ ಖಾಜಿ ಮತ್ತು ಟೀಮ್ ಸ್ನೇಕ ರೆಸ್ಕ್ಯೂ ಟೀಮ್ ತಿಪ್ಪಣ್ಣ ಅವರಿಗೆ ಮಾಹಿತಿಯನ್ನು ತಿಳಿಸಿದ್ದು ಸ್ಥಳಕ್ಕೇ ಆಗಮಿಸಿದ ತಿಪ್ಪಣ್ಣ ಅವರು ಬೈಕ್ ನಲ್ಲಿ ಅವಿತುಕೊಂಡಿದ್ದ ಹಾವನ್ನು ಹಿಡಿದಿದ್ದಾರೆ.ಈ ಒಂದು ಹಾವು ಆಭರಣದ ಹಾವಾಗಿದ್ದು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.