ಧಾರವಾಡ ದಲ್ಲಿ ತಂದೆ ಯಿಂದಲೇ ಮಗನ ಕೊಲೆ – ಸರಾಯಿ ಕುಡಿತಕ್ಕೆ ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ಮುಗಿಸಿದ ತಂದೆ…..

Suddi Sante Desk

ಧಾರವಾಡ –

ಕುಡಿಯಲಿಕ್ಕೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ತಂದೆಯಿಂದಲೇ ಮಗನನ್ನು ಕೊಲೆ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.ನಗರದ ತೆಲಗರ ಓಣಿಯಲ್ಲಿ ತಡರಾತ್ರಿ ಈ ಒಂದು ಘಟನೆ ನಡೆದಿದೆ.

ಬಸವರಾಜ ಹಿರೇಕುಂಬಿ ಎಂಬಾತನೇ ಕೊಲೆಯಾದ ಯುವಕನಾಗಿದ್ದಾನೆ.ಇವನು ಪ್ರತಿದಿನ ಸಾರಾಯಿ ಕುಡಯಲಿಕ್ಕೆ ಹಣಕ್ಕಾಗಿ ತಂದೆಯನ್ನ ಪಿಡಿಸುತಿದ್ದ ಎನ್ನಲಾಗಿದ್ದು ಹಣಕ್ಕಾಗಿ ತಂದೆ ಮಗನ ನಡುವೆ ಜಗಳವಾಗಿದೆ. ಅದೇ ಜಗಳ ವಿಕೋಪಕ್ಕೆ ಹೋಗಿ ಮಂಗಳವಾರ ತಡರಾತ್ರಿ ತಂದೆ ಪಕೀರಪ್ಪ ಹಿರೇಕುಂಬಿ ಹಾರೇಕೋಲಿನಿಂದ ಮಗನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಬಸವರಾಜ ಸ್ಥಳೀಯ ಆಸ್ಪತ್ರೆಗೆ ಸಾಗಿಸುವಾಗಿ ಸಾವನ್ನಪ್ಪಿದ್ದಾನೆ. ಆರೋಪಿ ಫಕೀರಪ್ಪನನ್ನ ಬಂಧಿಸಲಾಗಿದೆ. ಈ ಕುರಿತು ಉಪನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಮಾಡುತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.