ಧಾರವಾಡದಲ್ಲಿ ವ್ಯಕ್ತಿ ಸಜೀವ ದಹನ – ಮನೆಯಲ್ಲಿ ಮಲಗಿದ್ದ ವಿನಾಯಕ ಸುಟ್ಟ ಕರಕಲು…..

Suddi Sante Desk

ಧಾರವಾಡ –

ಮನೆಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮವಾಗಿ ವ್ಯಕ್ತಿ ಯೊಬ್ಬನು ಸಜೀವವಾಗಿ ದಹನವಾದ ಘಟನೆ ಧಾರವಾಡ ದಲ್ಲಿ ನಡೆದಿದೆ. ಹೌದು ಧಾರವಾಡ ನಗರದ ನಗರೇಶ್ವರ ದೇವಸ್ಥಾನ ಬಳಿ ಈ ಒಂದು ಘಟನೆ ನಡೆದಿದೆ.ವಿನಾಯಕ ಚಿನಿವಾಲರ(೩೬) ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ.ಕುಡಿದ ಅಮಲಿನಲ್ಲಿ ಮನೆಯಲ್ಲಿ ಮಲಗಿದ್ದನು ವಿನಾಯಕ.

ಈ‌ ವೇಳೆ ಬೆಂಕಿ ಹೊತ್ತಿ ಉರಿದ ಕಾರಣದಿಂದಾಗಿ ಸಜೀವ ದಹನವಾಗಿದ್ದಾನೆ.ಮನೆಯಲ್ಲಿಯೇ ಮಲಗಿಕೊಂಡ ಸ್ಥಳ ದಲ್ಲಿಯೇ ಸುಟ್ಟು ಕರಕಲಾಗಿದ್ದು ಇನ್ನೂ ಸುದ್ದಿ ತಿಳಿದ ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಭೇಟಿ ನೀಡಿ ಪರಿಶೀ ಲನೆ ಮಾಡಿದ್ದಾರೆ ಪೋಲೀಸರು.ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು ಸಧ್ಯ ದೂರನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.