ಕಲಘಟಗಿಯಲ್ಲಿ ಮಾಜಿ ಸಚಿವ ಸಂತೋಷ ಲಾಡ್ ತಿರಂಗಾ ಕಾರ್ಯಕ್ರಮ ಸಕ್ಸಸ್ – ಕ್ಷೇತ್ರದ ಮೂಲೆ ಮೂಲೆಗಳಿಂದ ಬಂದು ಯಶಸ್ಸು ಗೊಳಿಸಿದರು ಕಾರ್ಯ ಕ್ರಮವನ್ನು…..

Suddi Sante Desk

ಧಾರವಾಡ –


ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಅಂಗವಾಗಿ ಕಲಘಟಗಿ-ಅಳ್ನಾವರ ಮತಕ್ಷೇತ್ರದ ಕಲಘಟಗಿ ಪಟ್ಟಣ ವಿಶ್ವದಾಖಲೆ ನಿರ್ಮಿಸೋ ನಿಟ್ಟಿನಲ್ಲಿಂದು ಅದ್ದೂರಿ ರಾಷ್ಟ್ರಧ್ವಜ ರ್ಯಾಲಿ ನಡೆಯಿತು

ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಬರೋಬ್ಬರಿ 9 ಕಿಮಿ ಉದ್ದ, 9 ಅಡಿ ಅಗಲದ ತ್ರಿವರ್ಣ ಧ್ವಜ ರ‍್ಯಾಲಿಗೆ ಮಾಜಿ ಸಚಿವ ಸಂತೋಷ ಲಾಡ್ ಚಾಲನೆ ನೀಡಿದ್ರು ಅಲ್ದೆ, ರ‍್ಯಾಲಿಯುದ್ದಕ್ಕೂ 300ಕ್ಕೂ ಹೆಚ್ಚಿನ ಕಲಾತಂಡಗಳ ಪ್ರದರ್ಶನ ಜನ್ರ ಗಮನ ಸೆಳೆಯಿತು.

6 ಬೃಹತ್ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದು 1ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾರತ ಮಾತೆಗೆ ಪೂರ್ಣ ಕುಂಭ ಗೌರವ ಸಲ್ಲಿಸಿದ್ರು.

ಇನ್ನು ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಬ್ರಿಡ್ಜ್ ನಿಂದ ಗಳಗಿನಗಟ್ಟಿ ಕ್ರಾಸ್ ವರೆಗಿನ 9ಕಿ.ಮೀ ಅಂತರದಲ್ಲಿ ಧ್ವಜ ರ್ಯಾಲಿ ನಡೆದು ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿತು

ದಾರಿಯುದ್ದಕ್ಕೂ ಜನ ಭಾರತಮಾತೆಗೆ ಜೈಕಾರ ಹಾಕಿದ್ದು, ಕಣ್ಮನ ಸೆಳೆಯುವಂತಿತ್ತು.ಒಟ್ಟಾರೆ ತಿರಂಗಾ ಕಾರ್ಯಕ್ರಮ ಅದ್ದೂರಿಯಾಗಿ ಯಶಸ್ಸು ಕಂಡಿತು ಇದರೊಂದಿಗೆ ಮಾಜಿ ಸಚಿವ ಸಂತೋಷ ಲಾಡ್ ಕಾರ್ಯಕ್ರಮ ಕ್ಷೇತ್ರದ ತುಂಬೆಲ್ಲಾ ಮಾತನಾಡಿಕೊಳ್ಳುವಂತೆ ಹೊಸದೊಂದು ದಾಖಲೆ ನಿರ್ಮಾಣ ಮಾಡಿ ಎದುರಾಳಿಗಳಿಗೆ ಸಂಚಲನ ವನ್ನು ಮೂಡಿಸಿತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.