This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ವಾರ್ಡ್ 13 ರಲ್ಲಿ ಈ ಬಾರಿ ನಿವೇ ಎನ್ನುತ್ತಿದ್ದಾರೆ ಮತದಾರರು ಹೇಮಂತ ಗುರ್ಲಹೊಸೂರ ಅವರೇ ಈ ಬಾರಿ ನಿಶ್ಚಿತ ಮತದಾರರ ಮಾತು…..

WhatsApp Group Join Now
Telegram Group Join Now

ಧಾರವಾಡ –

ಬದಲಾವಣೆ ಬಯಸಿ ಹೊಸ ಕನಸಿನೊಂದಿಗೆ ಏನಾದರೂ ಮಾಡಿ ವಾರ್ಡ್ ನ್ನು ಅಭಿವೃದ್ದಿ ಮಾಡಬೇಕು ಮತದಾರರ ಸೇವೆಯೆ ನನ್ನ ಗುರಿ ನನ್ನ ಉದ್ದೇಶ.ಸ್ಥಳೀಯವಾಗಿ ನಾನು ಕೂಡಾ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಿ ಜನಪರ ಸಾಮಾಜಿಕ ಕೆಲಸಗಳನ್ನು ಮಾಡಿ ಜನನಾಯಕರಾಗಿರುವ ಹೇಮಂತ ಗುರ್ಲಹೊಸೂರ ಈಗ ಪಾಲಿಕೆಯ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.

ಹೌದು ಧಾರವಾಡದ 13ನೇ ವಾರ್ಡ್ ನಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಪಾಲಿಕೆಯ ಗದ್ದುಗೆ ಪ್ರವೇಶ ಮಾಡಲು ಸಜ್ಜಾಗಿದ್ದು ವಾರ್ಡ್ ನ ಮತದಾರರು ಕೂಡಾ ಜೈ ಜೈ ಎನ್ನುತ್ತಿ ದ್ದಾರೆ.ಈಗಾಗಲೇ ಕಳೆದ 20 ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿದ್ದುಕೊಂಡು ಕೈ ಪಕ್ಷದ ಸರ್ಕಾರ ದಲ್ಲಿ ಜನಪ್ರತಿನಿಧಿಗಳಿಂದ ಹತ್ತು ಹಲವಾರು ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಿರುವ ಇವರು ಈ ಬಾರಿ ವಾರ್ಡ್ ನಲ್ಲಿ ನಾನು ಗೆದ್ದು ಬಂದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ದಿ ಮಾಡಬಹುದು ಜೊತೆಯಲ್ಲಿ ಪಾಲಿಕೆಯ ಮೂಲಕ ಮತ್ತಷ್ಟು ಜನರ ಸೇವೆ ಮಾಡಬಹುದು ಎಂದು ಕೊಂಡು ಜನ ಸೇವೆಗೆ ಪಾಲಿಕೆಯ ಚುನಾವಣೆಯ ಮೂಲಕ ಮುಂದಾಗಿದ್ದಾರೆ.

ಹೀಗಾಗಿ ಧಾರವಾಡದ ವಾರ್ಡ್ 13 ರಲ್ಲಿ ಕಾಂಗ್ರೇಸ್ ಪಕ್ಷದಿಂದ ಹೇಮಂತ ಗುರ್ಲಹೊಸೂರ ಸ್ಪರ್ಧೆ ಮಾಡಿದ್ದಾರೆ.ಕಳೆದ 20 ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿದ್ದುಕೊಂಡು ಸಾಕಷ್ಚು ಪ್ರಮಾಣದಲ್ಲಿ ಸಂಘಟನೆ ಮಾಡುತ್ತಾ ಪಕ್ಷ ವಹಿಸಿಕೊಟ್ಟ ಸೂಚನೆ ನೀಡಿದ ಯಾವುದಾದರೂ ಕೆಲಸ ಕಾರ್ಯಗಳನ್ನು ಚಾಚು ತಪ್ಪದೇ ಮಾಡುತ್ತಾ ವಾರ್ಡ್ ನಲ್ಲಿ ಈಗಾ ಗಲೇ ಜನಪ್ರೀಯವಾಗಿದ್ದಾರೆ ಹೇಮಂತ ಗುರ್ಲ ಹೊಸೂರ

ಇನ್ನೂ ಪಕ್ಷದಿಂದ ಟಿಕೇಟ್ ಘೋಷಣೆಯಾಗುತ್ತಿ ದ್ದಂತೆ ಚುನಾವಣಾ ಅಖಾಡಕ್ಕೆ ಇಳಿದಿರುವ ಇವರು ಈಗಾಗಲೇ ಪಕ್ಷದಲ್ಲಿದ್ದುಕೊಂಡು ವಾರ್ಡ್ ನಲ್ಲಿ ಪ್ರಮುಖ ರಸ್ತೆ,ಚರಂಡಿ ಸಮುದಾಯ ಭವನ, ಸಾರ್ಜಜನಿಕರಿಗೆ ಅನುಕೂಲ ಆಗಲೆಂಬ ಕಾರಣ ಕ್ಕಾಗಿ ಸಾಕಷ್ಟು ಜನರ ಸೇವೆಯನ್ನು ಅಧಿಕಾರ ಬರುವ ಮುನ್ನವೇ ಮಾಡಿ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಿರುವ ಇವರ ಸ್ಪರ್ಧೆಯಿಂದ ವಾರ್ಡ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸ್ಪಂದನೆ ಸಿಗುತ್ತಿದೆ.

ಹೊಸ ಕನಸು ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿ ದಿರುವ ಇವರಿಗೆ ಉತ್ತಮ ಸ್ಪಂದನೆ ಸಿಗುತ್ತಿದ್ದು ಪ್ರಚಾರಕ್ಕೆ ಹೋದಲ್ಲೆಲ್ಲ ಒಳ್ಳೇಯ ಭರವಸೆಯ ಮಾತುಗಳು ಉತ್ಸಾಹದ ಗೆಲುವಿನ ಆಸೆಯ ಮಾತು ಗಳನ್ನು ವಾರ್ಡ್ ನ ಜನರು ಹೇಳುತ್ತಿದ್ದಾರೆ. ಪ್ರಚಾರ ಕ್ಕೆ ಹೋದಲೆಲ್ಲ ನಮಗೂ ನಿಮ್ಮಂಥವರೇ ಬೇಕಾ ಗಿದೆ ಬದಲಾವಣೆ ಬೇಕಾಗಿದೆ ನಮಗೆ ನೀವು ಬಂದಿದ್ದು ತುಂಬಾ ತುಂಬಾ ಅನುಕೂಲ ಯಾವುದೇ ಕಾರಣಕ್ಕೂ ನಿಮ್ಮೊಂದಿಗೆ ನಾವಿದ್ದೇವೆ ನೀವು ಬಂದರೆ ನಮಗೂ ಅನುಕೂಲ ನಿಮ್ಮಂಥ ಸರಳ ಸಜ್ಜನಿಕೆಯ ನಾಯಕರೇ ನಮ್ಮ ವಾರ್ಡ್ ಗೆ ಬೇಕು ಎನ್ನುತ್ತಿದ್ದಾರೆ.

ಇದೇ ಉತ್ಸಾಹದಲ್ಲಿ ಹೇಮಂತ ಗುರ್ಲಹೊಸೂರ ಅವರು ಪ್ರಚಾರವನ್ನು ಮಾಡುತ್ತಿದ್ದಾರೆ.ಇಂದು ಕೂಡಾ ವಾರ್ಡ್ ನ ಹಲವೆಡೆ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರವನ್ನು ಮಾಡಿದರು

ಹಲವೆಡೆ ಅಬ್ಬರದ ಪ್ರಚಾರವನ್ನು ಮಾಡಿ ಮತಯಾಚನೆ ಮಾಡಿದರು.ಪಾದಯಾತ್ರೆಯ ಮೂಲಕ ತೆರಳಿ ಪ್ರಚಾರ ಮಾಡುತ್ತಾ ಮತಯಾಚನೆ ಮಾಡಿ ಇದೊಂದು ಬಾರಿ ಅವಕಾಶವನ್ನು ನೀಡು ವಂತೆ ಮತದಾರರಲ್ಲಿ ಕೇಳಿಕೊಂಡರು.ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಹೇಮಂತ ಗುರ್ಲಹೊಸೂರ ಇವರೊಂದಿಗೆ ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು ಆಪ್ತರು ಅಭಿಮಾನಿಗಳು ಸೇರಿ ದಂತೆ ಹಲವರು ಪಾಲ್ಗೊಂಡು ಮನೆ ಮನೆಗೆ ತೆರಳಿ ಮತಯಾಚನೆಯನ್ನು ಮಾಡಿದರು.

ಒಟ್ಟಾರೆ ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು ಸಧ್ಯ ಹೇಮಂತ ಗುರ್ಲಹೊಸುರ ವಾರ್ಡ್ ನಲ್ಲಿ ಪ್ರಚಾರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಸ್ಪಂದನೆ ಸಿಕ್ಕಿದ್ದು ಹೊದಲೆಲ್ಲ ನೀವೆ ಈ ಬಾರಿ ನಮ್ಮ ವಾರ್ಡ್ ಬಾಸ್ ಎನ್ನುತ್ತಾ ಶುಭ ಹಾರೈಸುತ್ತಿದ್ದು ಮೊದಲ ಬಾರಿಗೆ ಸ್ಪರ್ಧೆ ಮಾಡಿರುವ ಇವರನ್ನು ಮೊದಲ ಬಾರಿಯಲ್ಲಿಯೇ ಪಾಲಿಕೆ ಗದ್ದುಗೆ ಹತ್ತಿಸಲು ವಾರ್ಡ್ ನ ಮತದಾರರು ಕಾತುರದಿಂದ ಸಿದ್ದರಾಗಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk