This is the title of the web page
This is the title of the web page

Live Stream

[ytplayer id=’1198′]

July 2024
T F S S M T W
 123
45678910
11121314151617
18192021222324
25262728293031

| Latest Version 8.0.1 |

National News

ಹೆಚ್ಚುತ್ತಿರುವ ಚಳಿ ಹಲವು ರಾಜ್ಯಗಳಲ್ಲಿ ಜನೆವರಿ 15 ರ ಶಾಲೆಗಳಿಗೆ ರಜೆ ಘೋಷಣೆ – ಅತಿಯಾದ ಚಳಿಯಿಂದಾಗಿ ತತ್ತರಿಸಿದ್ದ ಜನರ ಆರೋಗ್ಯದ ದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಣೆ

ಹೆಚ್ಚುತ್ತಿರುವ ಚಳಿ ಹಲವು ರಾಜ್ಯಗಳಲ್ಲಿ ಜನೆವರಿ 15 ರ ಶಾಲೆಗಳಿಗೆ ರಜೆ ಘೋಷಣೆ – ಅತಿಯಾದ ಚಳಿಯಿಂದಾಗಿ ತತ್ತರಿಸಿದ್ದ ಜನರ ಆರೋಗ್ಯದ ದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಣೆ
WhatsApp Group Join Now
Telegram Group Join Now

ನವದೆಹಲಿ

ಅದ್ಯಾಕೋ ಎನೋ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಿದ್ದು ಇನ್ನೂ ಹೆಚ್ಚುತ್ತಲೇ ಇದೆ.ಅದರಲ್ಲೂ ಉತ್ತರ ಭಾರತದಲ್ಲಿ ಹೆಚ್ಚಾ ಗುತ್ತಿದ್ದು ಹೀಗಾಗಿ ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾ ಗಿದೆ.ಹೌದು ಭಾರಿ ಚಳಿಯ ಹಿನ್ನಲೆಯಲ್ಲಿ ಜನೆವರಿ 15 ರವರೆಗೆ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.

ಸಧ್ಯ ದಿನದಿಂದ ದಿನಕ್ಕೆ ಭಾರಿ ಚಳಿಗೆ ಬೆಚ್ಚಿಬಿದ್ದಿ ದ್ದಾರೆ ಜನರು ಮತ್ತು ಶಾಲಾ ಮಕ್ಕಳು ಅದರಲ್ಲೂ ಉತ್ತರ ಭಾರತದಲ್ಲಿ ಈ ಒಂದು ಅತಿಯಾದ ಚಳಿ ಯಿಂದಾಗಿ ರಕ್ತವು ಹೆಪ್ಪುಗಟ್ಟುತ್ತಿದ್ದು ಮೆದುಳು ಸಮಸ್ಯೆಯಾಗಿ ಹೃದಯಾಘಾತದಿಂದ ಜನರು ಸಾವಿಗೀಡಾಗುತ್ತಿದ್ದಾರೆ.ಹೀಗಾಗಿ ಇದೇಲ್ಲವನ್ನು ಅರಿತುಕೊಂಡು ಸಧ್ಯ ದೆಹಲಿ,ಉತ್ತರ ಪ್ರದೇಶ, ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.

ಈಗಾಗಲೇ  ಉತ್ತರ ಪ್ರದೇಶದ ಲಖ್ನೋದಲ್ಲಿ ಜನವರಿ 14ರವರೆಗೆ ಶಾಲೆಗಳಿಗೆ ರಜೆ ನೀಡ ಲಾಗಿದ್ದು ರಾಷ್ಟ್ರ ರಾಜಧಾನಿ ದೆಹಲಿಯ ಖಾಸಗಿ ಶಾಲೆಗಳಿಗೆ ಜನವರಿ 15ರವರೆಗೆ ರಜೆ ಘೋಷಿ ಸಲಾಗಿದೆ.ಉತ್ತರ ಭಾರತದಲ್ಲಿ ತೀವ್ರ ಚಳಿಯಿಂದ ಜನರಲ್ಲಿ ರಕ್ತದೊತ್ತಡದಲ್ಲಿ ಏರುಪೇರು ಆಗುತ್ತಿ ದ್ದು ರಕ್ತ ಹೆಪ್ಪುಗಟ್ಟಿ, ಮೆದುಳು,ಹೃದಯ ಆಘಾತ ವಾಗಿ ಜನ ಸಾವಿಗೀಡಾಗುತ್ತಿದ್ದಾರೆ.ವೃದ್ಧರು ಮಾತ್ರವಲ್ಲ,ಮಧ್ಯ ವಯಸ್ಕರೂ ಹೃದಯಾ ಘಾತ ಮೆದುಳಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ.ಭಾರಿ ಚಳಿ ಮತ್ತು ಮಂಜು ಮುಸುಕಿದ ವಾತಾವರಣ ದಿಂದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದು ಉತ್ತರ ಪ್ರದೇಶದ ಕಾನ್ಪುರ ನಗರದಲ್ಲಿ ಒಂದು ವಾರದ ಅವಧಿಯಲ್ಲಿ ಭಾರಿ ಚಳಿಯಿಂದ 98 ಜನಮೃತಪಟ್ಟಿದ್ದಾರೆ.

ಕನಿಷ್ಠ ತಾಪಮಾನ 4ರಿಂದ 6 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ.ಭಾರಿ ಚಳಿಯ ಕಾರಣ ರಕ್ತ ದೊತ್ತಡದಲ್ಲಿ ಏರುಪೇರಾಗಿ ಹೃದಯಾಘಾತ ಸಂಭವಿಸುತ್ತಿದೆ.ರೈಲು ಮತ್ತು ವಿಮಾನ ಸಂಚಾರ ದಲ್ಲಿಯೂ ವ್ಯತ್ಯಯ ಉಂಟಾಗಿದೆ.ಭಾರಿ ಚಳಿ ಮತ್ತು ದಟ್ಟ ಮಂಜು ಆವರಿಸಿರುವುದರಿಂದ ಹಲವೆಡೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ದೆಹಲಿಯ ವಿವಿಧ ಪ್ರದೇಶಗಳಲ್ಲಿ ದಟ್ಟ ಮಂಜಿ ನಿಂದ ಸಂಚಾರದಲ್ಲಿ ವ್ಯತ್ಯಯವಾಗಿದೆ.ಉತ್ತರ ಪ್ರದೇಶ, ಉತ್ತರಾಖಂಡ, ಬಿಹಾರ,ಹರಿಯಾಣ, ಪಂಜಾಬ್ ಸೇರಿದಂತೆ ಹಲವೆಡೆ ಭಾರಿ ಚಳಿ, ಶೀತ ಗಾಳಿಗೆ ಜನ ತತ್ತರಿಸಿ ಹೋಗಿದ್ದಾರೆ.

ಸುದ್ದಿ ಸಂತೆ ನ್ಯೂಸ್ ನವದೆಹಲಿ…..


Google News

 

 

WhatsApp Group Join Now
Telegram Group Join Now
Suddi Sante Desk