ಲೋಕಾಯುಕ್ತ ಬಲೆಗೆ ಬಿದ್ದ ಇನ್ಸಪೇಕ್ಟರ್ ಒಂದು ಲಕ್ಷ ರೂಪಾಯಿ ತಗೆದುಕೊಳ್ಳುವಾಗ ಟ್ರ್ಯಾಪ್…..

Suddi Sante Desk
ಲೋಕಾಯುಕ್ತ ಬಲೆಗೆ ಬಿದ್ದ ಇನ್ಸಪೇಕ್ಟರ್ ಒಂದು ಲಕ್ಷ ರೂಪಾಯಿ ತಗೆದುಕೊಳ್ಳುವಾಗ ಟ್ರ್ಯಾಪ್…..

ರಾಯಚೂರು

ಲಂಚ ಪಡೆಯುವಾಗ ಇನ್ಸ್ಪೆಕ್ಟರ್ ರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ರಾಯಚೂರಿ ನಲ್ಲಿ ನಡೆದಿದೆ.ಹೌದು ಬರೋಬ್ಬರಿ 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ದೇವದುರ್ಗ ಹಾಗೂ ಮಾನ್ವಿ ಠಾಣೆಯ ಪೊಲೀಸ್​ ಇನ್ಸ್ ಪೆಕ್ಟರ ಬಸವರಾಜ ಕಾಕರಗಲ್ ಲೋಕಾಯುಕ್ತ ಬಲೆಗೆ ಬಿದ್ದವ ರಾಗಿದ್ದಾರೆ.

ಸಿರವಾರದಲ್ಲಿರುವ ವೈನ್ ​ಶಾಪ್ ಮೇಲೆ ಯಾವುದೇ ದೂರು ದಾಖಲಿಸದಿರುವುದಕ್ಕೆ ಎರಡು ಲಕ್ಷ ರೂ.ಗೆ ಇನ್ಸ್​ಪೆಕ್ಟರ್​ ಬಸವರಾಜ ಅವರು ಬೇಡಿಕೆ ಇಟ್ಟಿದ್ದರು.ವೈನ್ ಶಾಪ್ ಮಾಲೀಕ ಹನುಮಂತನಿಂದ ಒಂದು‌ ಲಕ್ಷ ರೂ. ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು ರೆಡ್​ಹ್ಯಾಂಡ್​ ಆಗಿ ಬಸವರಾಜ ಸಿಕ್ಕಿಬಿದ್ದಿದ್ದಾರೆ. ‌

ಮಲ್ಲಟ ಬಳಿ ಲಂಚ ಪಡೆಯುವ ವೇಳೆ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಇನ್ಸ್ಪೆಕ್ಟರ್ ನಾಗರಾಜ ಮೇಕಾ ನೇತೃತ್ವದಲ್ಲಿ ದಾಳಿ ನಡೆದಿದೆ. ಸದ್ಯ ಇನ್ಸ್ಪೆಕ್ಟರ್ ಬಸವರಾಜನನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿ ವಿಚಾರಣೆಗೆ ಒಳಪಡಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ರಾಯಚೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.