This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ಬಿಜೆಪಿ ನಾಯಕರ ಭಜನೆ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಹೆಜ್ಜೆ ಹಾಕುತ್ತಾ ಭಜನೆ ಮಾಡಿದ,ಜಗದೀಶ್ ಶೆಟ್ಟರ್ ,ಹಾಲಪ್ಪ ಆಚಾರ್ಯ್, ಶಂಕರ ಪಾಟೀಲ ಮುನೇನಕೊಪ್ಪ ಮತ್ತು ಶಾಸಕರು…..

WhatsApp Group Join Now
Telegram Group Join Now

ಹುಬ್ಬಳ್ಳಿ –

ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ ಬಿಜೆಪಿ ನಾಯಕರ ಭಜನೆ ಅದ್ಬುತವಾಗಿ ಕಂಡು ಬಂದಿತು.ಹೌದು ಮಹಾ ಮಂಗಳಾರತಿ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ನಾಯಕರು ನಿನ್ನೆ ಸಂಜೆ ಗಣಪತಿಗೆ ಮಹಾ ಮಂಗಳಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ವೇದಿಕೆಯ ಕೆಳಗಡೆ ಸಾಮೂಹಿಕವಾಗಿ ಭಜನೆ ಮಾಡಿದರು.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಕೈಯಲ್ಲಿ ಭಜನೆಗ ಳನ್ನು ಹಿಡಿದುಕೊಂಡು ಸ್ಟೇಪ್ ಹಾಕುತ್ತಿದ್ದರೆ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಚಿವರಾದ ಹಾಲಪ್ಪ ಆಚಾರ್ಯ ಶಂಕರ ಪಾಟೀಲ ಮುನೇನಕೊಪ್ಪ ಶಾಸಕರಾದ ಅರವಿಂದ ಬೆಲ್ಲದ ಸೇರಿದಂತೆ ಬಿಜೆಪಿ ಪಕ್ಷದ ನಾಯಕರು ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಹಲವರು ಈ ಒಂದು ಕಾರ್ಯಕ್ರಮದಲ್ಲಿ ಭಜನೆಯನ್ನು ಮಾಡಿದರು.

ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ ಪ್ರತಿಷ್ಠಾಪ ನೆಗೊಂಡಿರುವ ಗಣೇಶನ ಮೂರ್ತಿಯ ವೇದಿಕೆಯ ಮುಂದೆ ಈ ಒಂದು ಚಿತ್ರಣವು ಕಂಡು ಬಂದಿತು.ಕೇಂದ್ರ ಸಚಿವರಿಗೆ ಸಚಿವರು,ಶಾಸಕರು ಭಜನೆ ಮಾಡಿದರು.

ಎಲ್ಲ ವನ್ನೂ ಮರೆತ ನಾಯಕರು ಸಾಮೂಹಿಕವಾಗಿ ಸಖತ್ ಭಜನೆ ಮಾಡುತ್ತಾ ಅದರೊಂದಿಗೆ ಹೆಜ್ಜೆ ಹಾಕುತ್ತಿರುವ ಚಿತ್ರಣವು ಕಂಡು ಬಂದಿತು.ಗಣೇಶ ಪೆಂಡಾಲ್ ನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್,ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ್ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು, ಮಹಾನಗರ ಪಾಲಿಕೆ ಸದಸ್ಯರು,ಗಜಾನನ ಉತ್ಸವ ಮಹಾಮಂಡಳಿ ಸದಸ್ಯರು ಅವರಿಗೆ ಸಾಥ್ ನೀಡಿದರು ನಾಯಕರೊಂದಿಗೆ ಕೆಲ ಕಾಲ ತಾಳ ಹಾಕುತ್ತಾ ಸ್ಟೇಪ್ ಹಾಕುತ್ತಾ ಭಜನೆ ಮಾಡಿ ಸಂಭ್ರಮಿಸಿದರು..


Google News

 

 

WhatsApp Group Join Now
Telegram Group Join Now
Suddi Sante Desk