ಪತ್ರಕರ್ತ ಮಹೇಂದ್ರ ಕಾಟೀಕರ್ ತಾಯಿ ನಿಧನ

Suddi Sante Desk

ಹುಬ್ಬಳ್ಲಿ

ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಬಿ ಕೆ ಮಹೇಂದ್ರ ಕಾಟೀಕರ್ ತಾಯಿ ನಿಧನರಾಗಿದ್ದಾರೆ. ಸರೋಜಾ ಬಾಳು ಕಾಟೀಗರ ನಿಧನರಾದ ಹಿರಿಯ ಜೀವಿಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ಪಾರ್ಶ್ವುವಾಯುವಿನಿಂದ ಬಳಲುತ್ತಿದ್ದ ಇವರಿಗೆ ನಿನ್ನೇ ರಾತ್ರಿ ಮತ್ತೆ ಕಾಣಿಸಿಕೊಂಡಿದೆ. ಚಿಕಿತ್ಸೆ ಪಡೆದುಕೊಂಡು ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ಚನ್ನಾಗಿ ಇದ್ದ ಹಿರಿಯ ಜೀವಿಗೆ ನಿನ್ನೇ ರಾತ್ರಿ ಮತ್ತೇ ಅನಾರೋಗ್ಯವಾಗಿದ್ದು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ನಿಧನರಾಗಿದ್ದೆ. ಮೃತರಿಗೆ ನಾಲ್ವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 1 ಗಂಟೆಗೆ ಕೇಶ್ವಾಪುರದ ಮುಕ್ತಿಧಾಮದಲ್ಲಿ ಜರುಗಲಿದೆ .

ಇನ್ನೂ ಪತ್ರಕರ್ತ ಬಿ ಕೆ ಮಹೇಂದ್ರ ತಾಯಿಯವರ ನಿಧನಕ್ಕೇ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಣಪತಿ ಗಂಗೋಳ್ಳಿ ಸೇರಿದಂತೆ ಆಡಳಿತ ಮಂಡಳಿಯ ಎಲ್ಲಾ ಸರ್ವ ಸದಸ್ಯರು ಪತ್ರಕರ್ತ ಬಂಧುಗಳು ಹಿತೈಸಿಗಳು ಆಪ್ತರು ಅಗಲಿದ ಹಿರಿಯ ಜೀವಿಗೆ ಸಂತಾಪವನ್ನು ಸೂಚಿಸಿದ್ದಾರೆ. ಇನ್ನೂ ಮಲ್ಲಿಕಾರ್ಜುನ ಪಟ್ಟೇದ, ಹರ್ಷಾ ಕುಲಕರ್ಣಿ, ಸತೀಶ್ ,ಈರಣ್ಣಾ ಮೇಟಿ, ಪ್ರಕಾಶ್ ನೂಲ್ವಿ ,ವೆಂಕಟೇಶ್, ಪ್ರಕಾಶ್ ಹಿರೇಮಠ, ವಿನಾಯಕ ಪೂಜಾರಿ, ಮಹೇಶ್ ,ಮಲ್ಲಿಕಾರ್ಜುನ ರಡ್ಡೇರ ಸೇರಿದಂತೆ ಹಲವು ಪತ್ರಕರ್ತರು ಸಂತಾಪವನ್ನು ಸೂಚಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.