ಕಾಂಗ್ರೇಸ್ ಮುಖಂಡನ ಬರ್ತಡೇ ಪಾರ್ಟಿಯಲ್ಲಿ ಗುಂಡು – ಗುಂಡು ಹಾರಿಸಿ ಮತ್ತೆ ರಿವಾಲ್ವಾರ್ ಪಾಯಿಂಟ್ ಇಟ್ಟು ಶುಭ ಕೊರಿದ ಕೈ ಮುಖಂಡ

Suddi Sante Desk

ಧಾರವಾಡ –

ಕಾಂಗ್ರೆಸ್ ಮುಖಂಡನ ಬರ್ತಡೇ ಪಾರ್ಟಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಧಾರವಾಡ ದಲ್ಲಿ ನಡೆದಿದೆ. ಧಾರವಾಡದ ಗ್ರಾಮೀಣ ಪ್ರದೇಶ ದಲ್ಲಿ ಈ ಒಂದು ಘಟನೆ ನಡಿದಿದೆ.

ರಿವಾಲ್ವಾರ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಶುಭ ಕೋರಿದ್ದಾರೆ ಕೈ ಮುಖಂಡ ಮಲ್ಲಿಕಾರ್ಜುನ ಆಯಟ್ಟಿ.ಶಿವಳ್ಳಿ-ಹೆಬ್ಬಳ್ಳಿ ಗ್ರಾಮದ ಮಧ್ಯದ ತೋಟದ ಮನೆಯಲ್ಲಿ ನಡೆದಿದ್ದ ಬರ್ತಡೇ ಪಾರ್ಟಿಯಲ್ಲಿ ಈ ಒಂದು ಘಟನೆ ನಡಿದೆದೆ.

ಧಾರವಾಡ ತಾಲೂಕಿನ ಗ್ರಾಮವಾಗಿದ್ದು ಹುಟ್ಟು ಹಬ್ಬದ ಪಾರ್ಟಿಯಲ್ಲಿ ಈ ಗಾಳಿಯಲ್ಲಿ ಗುಂಡು ಹಾರಿದೆ. ತಾಪಂ ಮಾಜಿ ಸದಸ್ಯ ಅಣ್ಣಪ್ಪಗೌಡ ಚಿನ್ನಗುಡಿ ಎಂಬುವವರ ಬರ್ತಡೇ ಇತ್ತು.

ನಿನ್ನೆ ರಾತ್ರಿ ನಡೆದಿದ್ದ ಈ ಒಂದು ಬರ್ತಡೇ ಪಾರ್ಟಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಶುಭ ಕೋರಿದ್ದಾರೆ ಮಲ್ಲಿಕಾರ್ಜುನ ಆಯಟ್ಟಿ.

https://youtube.com/shorts/uFxIwSYSsOQ

ಮಲ್ಲಿಕಾರ್ಜುನ ಕೂಡಾ ಸಹ ಕಾಂಗ್ರೆಸ್ ಪಕ್ಷದ ಮುಖಂಡನಾಗಿದ್ದಾರೆ.ಗುಂಡು ಹಾರಿಸಿದ ಬಳಿಕ ರಿವಾಲ್ವಾರ್ ಪಾಯಿಂಟ್ ನ್ನುಇಟ್ಟು ಶುಭ ಹಾರೈಕೆ ಮಾಡಿದ್ದಾರೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿ ಯಲ್ಲಿ ಈ ಒಂದು ಘಟನೆ ನಡೆದಿದ್ದು ಸಧ್ಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.