ಅನ್ನದಾತರಿಗೆ ಅನ್ನ ಹಾಕಿದ ಖಾಕಿ ದೂರದ ಹಾಸನದಿಂದ ಹೋರಾಟಕ್ಕೆ ಬಂದವರಿಗೆ ಅನ್ನದ ವ್ಯವಸ್ಥೆ ಮಾಡಿ ಮೆಚ್ಚುಗೆ ಪಡುಕೊಂಡ ಪೊಲೀಸರು…..

Suddi Sante Desk

ಬೆಳಗಾವಿ –

ಸಾಮಾನ್ಯವಾಗಿ ಪೊಲೀಸರಿಗೆ ಒಂದು ಕಡೆ ಭದ್ರತೆ ಮತ್ತೊಂದು ಕಡೆ ಅವರ ಕೆಲಸ ಅವರಿಗೆ ಸಾಕಾಗಿರುತ್ತದೆ. ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ಬೆಳಗಾವಿಯ ಸುವರ್ಣ ಸೌಧ ಗೆ ಹೋರಾಟಕ್ಕೆ ಬಂದ ಅನ್ನದಾತರಿಗೆ ಅನ್ನವನ್ನು ಹಾಕಿ ಮಾನವೀಯತೆ ಮೆರೆದಿದ್ದಾರೆ ಪೊಲೀಸರು.

ಹೌದು ದೂರದ ಹಾಸನದಿಂದ ಹೋರಾಟಕ್ಕೆ ಬಂದ ರೈತ ಹೋರಾಟಗಾರರಿಗೆ ಅಲ್ಪೋಪಹಾರ ವ್ಯವಸ್ಥೆ ಮಾಡಿದ್ದಾರೆ ಪೋಲಿಸರು.ಎಪ್ಪತ್ತಕ್ಕೂ ಹೆಚ್ಚು ಜನರಿಗೆ ಅಲ್ಪೋಪಹಾ ರದ ವ್ಯವಸ್ಥೆ ಮಾಡಿ ನೆರವಾಗಿದ್ದಾರೆ.ಸೂಕ್ತವಾದ ವ್ಯವಸ್ಥೆ ಯೊಂದಿಗೆ ಸರದಿ ಸಾಲಲ್ಲಿ ತಮ್ಮ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಕೂಡಾ ಪೊಲೀಸರು ಈ ಒಂದು ಅಲ್ಪೋಪ ಹಾರವನ್ನು ನೀಡುತ್ತಾ ಇದರ ಜೊತೆಗೆ ನೀರಿನ ಬಾಟಲ್ ಕೊಟ್ಟಿದ್ದಾರೆ ಪೋಲಿಸರು.

ಕೊಂಡಸಕೊಪ್ಪದ ಪ್ರತಿಭಟನಾ ಸ್ಥಳದಲ್ಲಿ ಮಾನವೀಯತೆ ಮೆರೆದಿದ್ದಾರೆ ಪೋಲಿಸರು.ಸುವರ್ಣ ಸೌಧದಿಂದ ಎರಡು ಕಿಲೋಮೀಟರ್ ಅಂತರದಲ್ಲಿ ಇರುವ ಪ್ರತಿಭಟನಾ ಸ್ಥಳವಾಗಿದೆ.ಇದರೆಂದಿಗೆ ಪೊಲೀಸರು ತಮ್ಮ ಕರ್ತವ್ಯದ ನಡುವೆ ಸಮಾಜ ಮೆಚ್ಚುವ ಕೆಲಸವನ್ನು ಮಾಡಿ ಮಾದರಿ ಯಾಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.