ಕುಂದಗೋಳ –
ಕುಂದಗೋಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಎಮ್ ಆರ್ ಪಾಟೀಲ ಪರವಾಗಿ ಕನ್ನಡ ಚಿತ್ರರಂಗದ ಹಿರಿಯ ಯುವ ನಾಯಕ ನಟ ಕಿಚ್ಚ ಸುದೀಪ್ ಪ್ರಚಾರ ಮಾಡಲಿದ್ದಾರೆ ಹೌದು ಈಗಾಗಲೇ ರಾಜ್ಯಾದ್ಯಂತ ಬಿಡುವಿಲ್ಲದೆ ಸುತ್ತಾಡುತ್ತಿರುವ ಸುದೀಪ್ ಅವರು ಕುಂದಗೋಳ ಪಟ್ಟಣ ದಲ್ಲಿ ರೋಡ್ ಶೋ ದೊಂದಿಗೆ ಪ್ರಚಾರ ಮಾಡಲಿದ್ದಾರೆ
ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಸಂಜೆ ನಾಲ್ಕು ಗಂಟೆಗೆ ರೋಡ್ ಶೋ ದೊಂದಿಗೆ ಮತಯಾಚನೆ ಮಾಡಲಿದ್ದಾರೆ.ಗ್ರಾಮದ ಹೊಸ ಬಸ್ ನಿಲ್ದಾಣ ದಿಂದ ಕೋಟಿಬಾವಿ ನೇತಾಜಿ ಸರ್ಕಲ್ ಮಾರ್ಗವಾಗಿ ನಾಡರಬೈಲ್ ವರೆಗೆ ಈ ಒಂದು ರೋಡ್ ಶೋ ನಡೆಯಲಿದೆ.
ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಅಬ್ಬರದ ಮತಯಾಚನೆಯನ್ನು ಮಾಡಲಿದ್ದಾರೆ ಇವರೊಂದಿಗೆ ಛಲವಾದಿ ನಾರಾಯಣಸ್ವಾಮಿ ಕೂಡಾ ಪಾಲ್ಗೊಂಡು ಎಮ್ ಆರ್ ಪಾಟೀಲ ಪರವಾಗಿ ಮತಯಾಚನೆಯನ್ನು ಮಾಡಲಿದ್ದಾರೆ
ಸುದ್ದಿ ಸಂತೆ ನ್ಯೂಸ್ ಕುಂದಗೋಳ…..