ರಾಜ್ಯದಲ್ಲಿ ಮುಂದುವರಿದ NPS ರದ್ದತಿಗಾಗಿ ಪತ್ರ ಚಳವಳಿ…..

Suddi Sante Desk

ಬೆಳಗಾವಿ –

NPS ವಿರುದ್ದ ನಾಡಿನ ಶಿಕ್ಷಕರು ದೊಡ್ಡ ಪ್ರಮಾಣ ದಲ್ಲಿ ಹೋರಾಟವನ್ನು ರೂಪಿಸುತ್ತಿದ್ದಾರೆ.ಈಗಾಗಲೇ ಈ ಒಂದು ಯೋಜನೆಯನ್ನು ವಿರೋಧಿಸಿ ಹಲವು ಬಾರಿ ಮನವಿ ನೀಡಿದರು ಕೂಡಾ ಇದನ್ನು ರದ್ದು ಮಾಡಿಲ್ಲ ಹೀಗಾಗಿ ಇದರಿಂದ ಭವಿಷ್ಯ ದಲ್ಲಿ ಮತ್ತು ಸಧ್ಯ ಆಗುತ್ತಿರುವ ತೊಂದರೆಗಳಿಂದಾಗಿ ಮತ್ತೊಮ್ಮೆ ನಾಡಿನ ಶಿಕ್ಷಕರು ಮತ್ತೊಂದು ಹೋರಾಟದ ಆಂದೋಲನ ಆರಂಭ ಮಾಡಿದ್ದಾರೆ.

ಸಧ್ಯ ಸಿಡಿದೆದ್ದಿರುವ ನಾಡಿನ ಶಿಕ್ಷಕರು NPS ತೋಲಗಲಿ OPS ಜಾರಿಗೆ ಬರಲಿ ಎನ್ನುತ್ತಿದ್ದಾರೆ.ಈ ಹಿಂದೆ ಸಾಕಷ್ಟು ಪ್ರಮಾಣದಲ್ಲಿ ಹೋರಾಟವನ್ನು ಮಾಡಿರುವ ಶಿಕ್ಷಕ ಬಂಧುಗಳು ಸಧ್ಯ ಮತ್ತೊಮ್ಮೆ ಪತ್ರ ಚಳುವಳಿಯನ್ನು ಆರಂಭ ಮಾಡಿದ್ದಾರೆ.

ರಾಜ್ಯದ ಮೂಲೆ ಮೂಲೆಗಳಲ್ಲಿ ಶಿಕ್ಷಕರು ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಹೋರಾಟದ ಪತ್ರ ಚಳುವಳಿ ಯನ್ನು ಆರಂಭ ಮಾಡಿದ್ದು ಮುಂದುವರಿದಿದೆ ಬೀದರ್ ದಿಂದ ಹಿಡಿದು ಬೆಂಗಳೂರು ವರೆಗೂ ಪ್ರತಿಯೊಂದು ಜಿಲ್ಲಾ.ತಾಲ್ಲೂಕು ಗ್ರಾಮ ಗಳಲ್ಲೂ ಶಿಕ್ಷಕರು ಇಂದು ತಮ್ಮ ತಮ್ಮ ಕರ್ತವ್ಯದ ನಡುವೆ ಸಮಯವನ್ನು ಬಿಡುವು ಮಾಡಿಕೊಂಡು ಪತ್ರವನ್ನು ಬರೆದು ಚಳುವಳಿಯನ್ನು ಮಾಡಿದರು.

ಇನ್ನೂ NPS ರದ್ದತಿಗಾಗಿ ಕಾಕತಿ ವಲಯದ ಬೆಳಗಾವಿ ಗ್ರಾಮೀಣ ಶಿಕ್ಷಕರು ಪತ್ರ ಬರೆಯುವುದರ ಮೂಲಕ ಪತ್ರ ಚಳುವಳಿ ಮಾಡಲಾಯಿತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.