ಲಂಚ ಕೇಳಿದ ಸರ್ಕಾರಿ ಅಧಿಕಾರಿಯನ್ನು ಲೋಕಾಯುಕ್ತ ಬಲೆಗೆ ಕೆಡವಿಡ ರೈತ – 15 ಸಾವಿರ ಹಣ ತಗೆದುಕೊಳ್ಳುವಾಗ ಟ್ರ್ಯಾಪ್…..

Suddi Sante Desk
ಲಂಚ ಕೇಳಿದ ಸರ್ಕಾರಿ ಅಧಿಕಾರಿಯನ್ನು ಲೋಕಾಯುಕ್ತ ಬಲೆಗೆ ಕೆಡವಿಡ ರೈತ – 15 ಸಾವಿರ ಹಣ ತಗೆದುಕೊಳ್ಳುವಾಗ ಟ್ರ್ಯಾಪ್…..

ತುಮಕೂರು

ರೈತನಿಂದ 15000 ರೂ. ಲಂಚ ಪಡೆಯುವ ವೇಳೆ ಅಧಿಕಾರಿಯೊಬ್ವರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ತುಮಕೂರಿನಲ್ಲಿ ನಡೆದಿದೆ.ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇಇ ಕಾಶಿ ವಿಶ್ವನಾಥ್ ಲೋಕಾ ಬಲೆಗೆ ಬಿದ್ದ ಅಧಿಕಾರಿ ಯಾಗಿದ್ದಾರೆ.

ಲಕ್ಷ್ಮಿ ನಾರಾಯಣ್ ಎಂಬುವರ ಬಳಿ ಲಂಚ ಸ್ವೀಕಾರದ ವೇಳೆ ಈ ಒಂದು ದಾಳಿ ನಡೆದಿದೆ. ಲಕ್ಷ್ಮೀ ನಾರಾಯಣ್ ಅವರ 1 ಎಕರೆ 7ಗುಂಟೆ ಜಮೀನ ಪೈಕಿ.4 ಗುಂಟೆ ಒಳ ಚರಂಡಿ ಮಂಡಳಿ ಗೆ ಸೇರಿತ್ತು.ಜಮೀನು ಪೋಡಿ ಮಾಡಲು ಇಲಾಖೆ ಯಿಂದ ಪತ್ರ ನೀಡಬೇಕಿತ್ತು.

ಪತ್ರ ನೀಡಲು ಕಾಶಿ ವಿಶ್ವನಾಥ್ 15 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಕಚೇರಿಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ ನಡೆದಿದೆ. ತುಮಕೂರು ಲೋಕಾಯುಕ್ತ ಎಸ್ಪಿ ವಲ್ಲಿ ಬಾಷಾ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದೆ.ಡಿವೈಎಸ್ಪಿ ಗಳಾದ ಮಂಜುನಾಥ್, ಹರೀಶ್ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.

ಸುದ್ದಿ ಸಂತೆ ನ್ಯೂಸ್ ತುಮಕೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.