ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗೆ ಕಚ್ಚಿದ ಹಾವು – ತಕ್ಷಣ ಆಸ್ಪತ್ರೆಗೆ ಶಿಪ್ಟ್ ಮಾಡಿದ ಶಿಕ್ಷಕರು ಪ್ರಾಣಾ ಪಾಯದಿಂದ ಪಾರಾದ ಮಲ್ಲಿಕಾರ್ಜುನ…..

Suddi Sante Desk

ಬೆಳಗಾವಿ –

ಶಾಲೆ ಪ್ರಾರಂಭದ ದಿನವೇ ಸರ್ಕಾರಿ ಶಾಲೆಯೊಂದರಲ್ಲಿ ಭಾರೀ ಅನಾಹುತವೊಂದು ನಡೆದಿದೆ.ಹೌದು ಶಾಲೆಯಲ್ಲಿ ವಿದ್ಯಾರ್ಥಿಗೆ ಹಾವೊಂದು ಕಚ್ಚಿದೆ

ಹೀಗೆ ಶಾಲೆಯಲ್ಲಿ ವಿದ್ಯಾರ್ಥಿಗೆ ಹಾವು ಕಚ್ಚಿದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಮದಮಕ್ಕನಾಳ ಗ್ರಾಮದಲ್ಲಿ ಘಟನೆ ನಡೆದಿದೆ.

5 ನೇ ತರಗತಿ ವಿದ್ಯಾರ್ಥಿ ಮಲ್ಲಿಕಾರ್ಜುನ ಹರಿಜನಗೆ ಹಾವು ಕಚ್ಚಿದ್ದು ಕಾಲಿಗೆ ಕಚ್ಚುತ್ತಿದ್ದಂತೆ ಕೂಡಲೇ ಇವನನ್ನು ಶಾಲೆಯಿಂದ ಆಸ್ಪತ್ರೆಗೆ ಸೇರಿಸಲಾಯಿತು

ತಕ್ಷಣವೇ ವಿದ್ಯಾರ್ಥಿಯನ್ನ ಹುಕ್ಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಶಾಲೆಯ ಶಿಕ್ಷಕರು ಸಧ್ಯ ಈ ಬಾಲಕನು ಪ್ರಾಣಾಪಾಯದಿಂದ ಪಾರಾಗಿದ್ದು ಸಧ್ಯ ಚಿಕಿತ್ಸೆ ಯನ್ನು ವಿದ್ಯಾರ್ಥಿ ಮಲ್ಲಿಕಾರ್ಜುನನಿಗೆ ನೀಡಲಾಗುತ್ತದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.