This is the title of the web page
This is the title of the web page

Live Stream

[ytplayer id=’1198′]

September 2025
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ವಿಶ್ವಕರ್ಮ ಸಮಾಜಕ್ಕೆ ST ಮೀಸಲಾತಿ ನೀಡಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ – 2ಎ ದಿಂದ ಎಸ್ ಟಿ ಗೆ ಸೇರ್ಪಡೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ

ವಿಶ್ವಕರ್ಮ ಸಮಾಜಕ್ಕೆ ST ಮೀಸಲಾತಿ ನೀಡಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ – 2ಎ ದಿಂದ ಎಸ್ ಟಿ ಗೆ ಸೇರ್ಪಡೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ
WhatsApp Group Join Now
Telegram Group Join Now

ಧಾರವಾಡ

ಹೌದು ವಿಶ್ವಕರ್ಮ ಸಮಾಜಕ್ಕೆ ST ಮೀಸಲಾತಿ ಯನ್ನು ನೀಡುವಂತೆ ಒತ್ತಾಯಿಸಿ ಧಾರವಾಡದಲ್ಲಿ ವಿಶ್ವಕರ್ಮ ಸಮಾಜದವರು ಬೃಹತ್ ಪ್ರತಿಭಟನೆ ಮಾಡಿದರು.ನಗರದ ಕಲಾಭವನದಿಂದ ಹೊರಟ ಬೃಹತ್ ಪ್ರತಿಭಟನಾ ಜಾಥಾ ಜುಬಲಿ ಸರ್ಕಲ್ ದಿಂದ ಹೊರಟು ಕೋರ್ಟ್ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪ್ರತಿಭಟನೆ ಮಾಡಿದರು.

 

 

ಪ್ರಮುಖವಾಗಿ ವಿಶ್ವಕರ್ಮ ಸಮಾಜವನ್ನು 2ಎ ದಿಂದ ಎಸ್ ಟಿ ಗೆ ಸೇರ್ಪಡೆ ಮಾಡಬೇಕು ಇದ ರೊಂದಿಗೆ ಇನ್ನು ಕೆಲವೊಂದಿಷ್ಟು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಈ ಒಂದು ಪ್ರತಿಭಟನೆಯನ್ನು ಮಾಡಲಾಯಿತು. ಜಿಲ್ಲಾಧ್ಯಕ್ಷ ಮನೋಹರ ಲಕ್ಕುಂಡಿ ಇವರ ನೇತ್ರತ್ವ ದಲ್ಲಿ ಈ ಒಂದು ಬೃಹತ್ ಪ್ರತಿಭಟನಾ ರಾಲಿ ನಡೆಯಿತು ಇದೇ ವೇಳೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿಯನ್ನು ಸಲ್ಲಿಸಿ ಈ ಕೂಡಲೇ ವಿಶ್ವಕರ್ಮ ಸಮಾಜಕ್ಕೆ ಎಸ್ ಟಿ ಮೀಸಲಾತಿಯನ್ನು ನೀಡಬೇಕು ಸಧ್ಯ ಇರುವ 2ಎ ಮೀಸಲಾತಿಯಿಂದ ಎಸ್ ಟಿ ಮೀಸಲಾತಿ ಕಲ್ಪಿಸುವಂತೆ ಒತ್ತಾಯವನ್ನು ಮಾಡಲಾಯಿತು.

ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.ಈ ಒಂದು ಪ್ರತಿಭಟನೆಯಲ್ಲಿ ಮಂಜುನಾಥ ಬಡಿಗೇರ,ವಸಂತ ಅರ್ಕಾಚಾರಿ,ಸಂತೋಷ ಬಡಿಗೇರ,ಕಾಳಪ್ಪ ಬಡಿಗೇರ,ಶಿವಣ್ಣ ಬಡಿಗೇರ ಮನೋಹರ ಲಕ್ಕುಂಡಿ,ಸೇರಿದಂತೆ ಹಲವರು ಈ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸಮಾಜಕ್ಕೆ ಮೀಸಲಾತಿ ವಿಚಾರದಲ್ಲಿ ಧ್ವನಿ ಎತ್ತಿದರು.ಇಧರೊಂದಿಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಅಧ್ಯಕ್ಷರು ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು ಅಖಿಲ ಕರ್ನಾಟಕ ವಿಶ್ವ ಕರ್ಮ ಮಹಾಸಭಾ ಬೆಂಗಳೂರು ಧಾರವಾಡ ಜಿಲ್ಲೆಯ ಘಟಕ ದ ಬಂಧುಗಳು ಪಾಲ್ಗೊಂಡಿದ್ದರು.

ವರದಿ  – ಚಕ್ರವರ್ತಿ ಜೊತೆ ಮಂಜುನಾಥ ಬಡಿಗೇರ ಸುದ್ದಿ ಸಂತೆ ನ್ಯೂಸ್ ಧಾರವಾಡ


Google News

 

 

WhatsApp Group Join Now
Telegram Group Join Now
Suddi Sante Desk