This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಶಾಸಕರ ಸಂಸದರ ಹುಟ್ಟ ಹಬ್ಬಕ್ಕೇ ಆರಂಭಗೊಂಡ ಪಂದ್ಯಗಳು – ಗೆಲುವಿಗಾಗಿ ಸೆಣಸಾಡುತ್ತಿರುವ ಟೀಮ್ ಗಳು

WhatsApp Group Join Now
Telegram Group Join Now

ಧಾರವಾಡ –

ಧಾರವಾಡ ಸಂಸದರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಹುಟ್ಟು ಹಬ್ಬಕ್ಕಾಗಿ ಧಾರವಾಡದಲ್ಲಿ ಕ್ರಿಕೇಟ್ ಪಂದ್ಯಾವಳಿ ಆರಂಭಗೊಂಡಿದೆ. ಧಾರವಾಡ ಗ್ರಾಮಾಂತರ.ಬಿಜೆಪಿ ಜಿಲ್ಲಾ ಯುವ ಮೋರ್ಚಾ ಘಟಕದಿಂದ ಈ ಒಂದು ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರ ಹುಟ್ಟು ಹಬ್ಬ ನವಂಬರ್ 27 ಕ್ಕೇ ಇದೆ. ಇನ್ನೂ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿಯವರ ಹುಟ್ಟು ಹಬ್ಬ ಈಗಾಗಲೇ ಮುಗಿದಿದೆ.ಇಬ್ಬರು ನಾಯಕರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿರುವ ಬಿಜೆಪಿ ಯುವ ಮೋರ್ಚಾದ ಮುಖಂಡರು ಈಗ ಮತ್ತೊಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಶಂಕರ ಕೋಮಾರದೇಸಾಯಿ ನೇತ್ರತ್ವದಲ್ಲಿ ಟೂರ್ನಾಮೆಂಟ್ ನ್ನು ಆಯೋಜನೆ ಮಾಡಲಾಗಿದೆ.

ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಟೂರ್ನಾಮೆಂಟ್ ಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು. ಮೈದಾನದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಐದು ದಿನಗಳ ಪಂದ್ಯಾವಳಿಗೆ ಅದ್ದೂರಿಯಾಗಿ ಚಾಲನೆ ನೀಡಿದರು.

ಇನ್ನೂ ಪಂದ್ಯಾವಳಿಯಲ್ಲಿ ಜಿಲ್ಲೆಯಿಂದ ಆಯ್ದ ಒಟ್ಟು 36 ತಂಡಗಳನ್ನು ಆಯ್ಕೆ ಮಾಡಿ 8 ಓವರ್ ಗಳ ಮ್ಯಾಚ್ ನ್ನು ಆಡಿಸಲಾಗುತ್ತಿದೆ. ಎಲ್ಲಾ ತಂಡಗಳಿಗೂ ದೇಶಕ್ಕಾಗಿ ಹೋರಾಡಿದ ಸ್ವಾಂತತ್ರ್ಯ ಸೇನಾನಿಗಳು ನಾಯಕರ ಬಿಜೆಪಿ ಗಣ್ಯರ ಹೆಸರುಗಳನ್ನಿಟ್ಟು ಆಡಿಸಲಾಗುತ್ತಿದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಈ ಕ್ರಿಕೇಟ್ ಪಂದ್ಯಾವಳಿಗಳು ನವಂಬರ್ 25 ರವರೆಗೆ ನಡೆಯಲಿವೆ.

ಇನ್ನೂ ಮೊದಲನೇಯ ದಿನ ನಿನ್ನೇ ಹಲವು ತಂಡಗಳು ಎದುರಾಳಿ ತಂಡಗಳೊಂದಿಗೆ ಸೆಣಸಾಡಿದವು. ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ ,ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ , ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ,ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಶಂಕರ ಕೋಮಾರದೇಸಾಯಿ ತಾಲ್ಲೂಕು ಅಧ್ಯಕ್ಷ ರುದ್ರಪ್ಪ ಅರಿವಾಳ, ಸಂತೋಷ ಜೀವನ ಗೌಡ್ರ ಸೇರಿದಂತೆ ಹಲವರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk