ಶಿಕ್ಷಕರ ಸಮಸ್ಯೆ ಗೆ ಭರವಸೆ ನೀಡಿದ ಶಿಕ್ಷಣ ಸಚಿವರು ಜಗದೀಶ ಬೋಳಸೂರ ನೇತೃತ್ವದಲ್ಲಿ ಶಿಕ್ಷಣ ಸಚಿವರ ಭೇಟಿ ಮಾತುಕತೆ…..

Suddi Sante Desk

ಬೆಳಗಾವಿ –

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ತಗೆದುಕೊಂಡ ನಿರ್ಣಯದಂತೆ ಶಿಕ್ಷಣ ಸಚಿವರನ್ನು ಭೇಟಿ ಯಾಗಿ ಮಾತುಕತೆ ಮಾಡಲಾಯಿತು.ಹೌದು ಸಭೆಯಲ್ಲಿ ಮಂಡಿಸಿದ ವಿಷಯಗಳಂತೆ ಜಗದೀಶ ಬೋಳಸೂರ ನೇತೃತ್ವದಲ್ಲಿ ಶಿಕ್ಷಣ ಸಚಿವರ ಭೇಟಿಯಾಗಿ ರಾಜ್ಯದ ಶಿಕ್ಷಕರ ಸಮಸ್ಯೆ ಗಳ ಕುರಿತು ಮಾತುಕತೆ ಮಾಡಲಾಯಿತು‌ ಪ್ರಮುಖವಾಗಿ ಸೇವಾಜೇಷ್ಟತೆ ಆದರಿಸಿ ಪರೀಕ್ಷೆ ಇಲ್ಲದೆ ಪದವೀಧರರ ವಿಲೀನ 33%ತೆಗೆದು75%ಜಾರಿಗೆ ಬರಲಿ ವರ್ಗಾವಣೆಯಲ್ಲಿ ಸ್ವಂತ ಜಿಲ್ಲೆಗೆ ಒಂದು ಸಲ ಹೋಗಲು ಅವಕಾಶ ತಾಲ್ಲೂಕಿನ ಒಳಗೆ ಯಾವುದೇ ನಿರ್ಬಂದವಿಲ್ಲದೆ ವರ್ಗಾವಣೆಗೆ ಅವಕಾಶ ಮಾಡಿಕೊಡು ವುದು ಸಚಿವರಿಂದ ಇವೆಲ್ಲವುಗಳನ್ನು ಗಂಭೀರವಾಗಿ ಪರಿಗಣಿಸಿ ಗುಣಾತ್ಮಕ ನಿರ್ಧಾರ ತೆಗೆದುಕೊಳ್ಳುವ ಭರವಸೆ ಯನ್ನು ಸಚಿವರು ನೀಡಿದರು.

ಸಧ್ಯದ ರಾಜ್ಯದಲ್ಲಿನ ಶಿಕ್ಷಕರ ಸಮಸ್ಯೆಗಳ ಕುರಿತು ಸಚಿವ ರೊಂದಿಗೆ ಚರ್ಚೆ ಯನ್ನು ಮಾಡಿ ಸ್ಪಂದಿಸುವಂತೆ ಒತ್ತಾಯ ಮಾಡಿದರು.ಈ ವಿಷಯವಾಗಿ ಮುಂದಿನ ದಿನಗಳಲ್ಲಿ ಸಚಿವರು ಸೂಕ್ತವಾದ ನಿರ್ಣಯಗಳನ್ನು ತೆಗೆದುಕೊಳ್ಳುವ ಭರವಸೆ ಯನ್ನು ನೀಡಿದ್ದಾರೆ ಎಂದು ಶಿಕ್ಷಕರ ಸಂಘದ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಶ್ರೀ ಜಗದೀಶ ಬೋಳಸೂರ ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.