ಮನೆಯ ಮೇಲೆ ಕುಟುಂಬಸ್ಥ ರೊಂದಿಗೆ ತಿರಂಗಾ ಹಾರಿಸಿದ ಶಾಸಕ ಅಮೃತ ದೇಸಾಯಿ ಪತ್ನಿ ಪ್ರಿಯಾ ಮತ್ತು ಮಕ್ಕಳೊಂದಿಗೆ ಆಪ್ತ ರೊಂದಿಗೆ ಧ್ವಜಾರೋಹನ…..

Suddi Sante Desk

ಧಾರವಾಡ –

ಇಂದಿನಿಂದ ಹರ್ ಘರ್ ತಿರಂಗಾ ಅಭಿಯಾನ ಆರಂಭದ ಹಿನ್ನಲೆಯಲ್ಲಿ ಧಾರವಾಡ ದಲ್ಲಿ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ತಿರಂಗಾ ಧ್ವಜಾರೋಹನ ಮಾಡಿದರು ಮನೆಯ ಮೇಲೆ ತಿರಂಗಾವನ್ನು ಹಾರಿಸಿದರು.

ಧ್ವಜಾರೋಹಣಕ್ಕೂ ಮುನ್ನ ಮನೆಯಲ್ಲಿ ಭಾರತ ಮಾತೆಗೆ ಪೂಜೆ ಯನ್ನು ಸಲ್ಲಿಸಿ ನಂತರ ಪತ್ನಿ ಪ್ರಿಯಾ ಮತ್ತು ಮಕ್ಕಳೊಂದಿಗೆ ಸೇರಿಕೊಂಡು ಮನೆ ಮೇಲೆ ತಿರಂಗಾ ಹಾರಿಸಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಮನೆ ಯಲ್ಲಿ ಚಾಲನೆ ನೀಡಿದರು.

ಮಲಪ್ರಭಾ ನಗರದಲ್ಲಿರುವ ನಿವಾಸದಲ್ಲಿ ಮೇಲೆ ಈ ಒಂದು ಕಾರ್ಯಕ್ರಮ ನಡೆಯಿತು.ಧ್ವಜಾರೋಹಣ ಮಾಡಿದ ಶಾಸಕರು ಸೆಲ್ಯೂಟ್ ಹೊಡೆದರು ಅಲ್ಲದೆ ವಂದೇ ಮಾತರಂ ವಂದೇ ಮಾತರಂ ಎನ್ನುತ್ತಾ ಘೋಷಣೆಗಳನ್ನು ಕೂಗಿದರು.ಇದೇ ವೇಳೆ ಶಾಸಕರೊಂದಿಗೆ ಅವರಿಗೆ ಪತ್ನಿ ಪ್ರಿಯಾ ಮತ್ತು ಅವರ ಮಕ್ಕಳು ಆಪ್ತ ಕಾರ್ಯದರ್ಶಿ ಗಳಾದ ಪ್ರಕಾಶ ಕಟ್ಟಿ,ಭೀಮಾಶಂಕರ,ಮಂಜುನಾಥ್, ಆತ್ಮಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದು ಸಾಥ್ ನೀಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.