ನರೇಂದ್ರ ಗ್ರಾಮದಲ್ಲಿ ವೀರ ಸಾವರ್ಕರ್ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಅಮೃತ ದೇಸಾಯಿ ಶಂಕರ ಕೋಮಾರ ದೇಸಾಯಿ ನೇತ್ರತ್ವದಲ್ಲಿ ಯಶಶ್ವಿ ಕಾರ್ಯಕ್ರಮ

Suddi Sante Desk


ಧಾರವಾಡ –

ಹೌದು ಧಾರವಾಡದ ನರೇಂದ್ರ ಗ್ರಾಮದಲ್ಲಿ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಅವರ ಭಾವಚಿತ್ರ ಮರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿತ್ತು.ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಈ ಒಂದು ಭಾವ ಚಿತ್ರ ಮೆರವಣಿಗೆ ಕಾರ್ಯಕ್ರಮಕ್ಕೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು.

ನರೇಂದ್ರ ಗ್ರಾಮದಲ್ಲಿ ಗ್ರಾಮದ ಯುವಕರಿಂದ ಹಮ್ಮಿ ಕೊಂಡ ವೀರ ಸಾವರ್ಕರ ಅವರ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮವು ಗ್ರಾಮದ ತುಂಬೆಲ್ಲಾ ಸಡಗರ ಸಂಭ್ರಮ ದಿಂದ ನಡೆಯಿತು.ಗ್ರಾಮದ ಬಿಜೆಪಿ ಯುವ ಮುಖಂಡ ಶಂಕರ ಕೋಮಾರ ದೇಸಾಯಿ,ರುದ್ರಪ್ಪ ಹರಿವಾಳ ಇವರ ನೇತ್ರತ್ವದಲ್ಲಿ ಈ ಒಂದು ಭವ್ಯ ಮೆರವಣಿಗೆ ಕಾರ್ಯಕ್ರಮ ನಡೆಯಿತು.ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ಶಾಸ ಕರು ಕೂಡಾ ಪಾಲ್ಗೊಂಡು ಯಶಶ್ವಿಗೊಳಿಸಿದರು.

ಈ ಒಂದು ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಪ್ರೇಮಾ ಕೋಮಾರ ದೇಸಾಯಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಗಂಗಮ್ಮ ನಿರಂಜನ ಉಪಾಧ್ಯಕ್ಷರಾದ ಶ್ರೀ ತಿರುಕಯ್ಯ ಹಿರೇಮಠ,ಶಂಕರ ಕೋಮಾರ ದೇಸಾಯಿ, ಮಂಜುನಾಥ ಈಳಗೇರ, ಸುದತ್ತ ಮುತಾಲಿಕ ದೇಸಾಯಿ, ಈರಪ್ಪ ಗಂಟಿ, ಮಂಜುನಾಥ್ ತಿರ್ಲಾಪುರ, ಶ್ರೀಮತಿ ಸುಶೀಲಾ ಪಾಟೀಲ,ನಾಗೇಶ ಹಟ್ಟಿಹೊಳಿ, ಈಶ್ವರ್ ತೋಟಗೆರೆ ಸಂಗಪ್ಪ ಐಐಟಿ ಬಾಪುಗೌಡ ದೇಸಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.