This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

ಶಾಸಕ ಅಮೃತ ದೇಸಾಯಿ ನೇತ್ರತ್ವದಲ್ಲಿ ನಾಳೆ ಸಂಕಲ್ಪ ಸಮಾವೇಶ – ನಾಳೆ ನಡೆಯಲಿರುವ ಸಮಾವೇಶದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸೇರಿದಂತೆ ಹಲವರು ಭಾಗಿ

ಶಾಸಕ ಅಮೃತ ದೇಸಾಯಿ ನೇತ್ರತ್ವದಲ್ಲಿ ನಾಳೆ ಸಂಕಲ್ಪ ಸಮಾವೇಶ – ನಾಳೆ ನಡೆಯಲಿರುವ ಸಮಾವೇಶದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸೇರಿದಂತೆ ಹಲವರು ಭಾಗಿ
WhatsApp Group Join Now
Telegram Group Join Now

ಧಾರವಾಡ

 

ಹೌದು ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಳೆ ಶಾಸಕ ಅಮೃತ ದೇಸಾಯಿ ಉಸ್ತುವಾರಿಯಲ್ಲಿ ಸಂಕಲ್ಪ ಸಮಾ ವೇಶ ನಡೆಯಲಿದೆ.ಧಾರವಾಡ ಗ್ರಾಮೀಣ ಬಿಜೆಪಿ ಘಟಕದಿಂದ ಈ ಒಂದು ಸಮಾವೇಶವು ನಾಳೆ ಅದ್ದೂರಿಯಾಗಿ ನಡೆಯಲಿದ್ದು ನಗರದ ಹೊರ ವಲಯದ ಸಾಯಿ ಅರಣ್ಯ ಸಭಾಂಗಣದಲ್ಲಿ ಆಯೋಜನೆಯನ್ನು ಮಾಡಲಾಗಿದ್ದು ಈಗಾಗಲೇ ಈ ಒಂದು ಕಾರ್ಯಕ್ರಮದ ಕುರಿತಂತೆ ಶಾಸಕ ಅಮೃತ ದೇಸಾಯಿ ಪಕ್ಷದ ಮುಖಂಡರು ಕಾರ್ಯಕರ್ತರು ನಾಯಕರೊಂದಿಗೆ ಎರಡು ಮೂರು ಬಾರಿ ಸಭೆಯನ್ನು ಮಾಡಿದ್ದಾರೆ

 

 

ಅಚ್ಚು ಕಟ್ಟಾಗಿ ಕಾರ್ಯಕ್ರಮವನ್ನು ಮಾಡುವಂತೆ ವ್ಯವಸ್ಥೆ ಕುರಿತಂತೆ ಸಂಪೂರ್ಣವಾದ ಸಿದ್ದತೆಯ ಜವಾಬ್ದಾರಿಯೊಂದಿಗೆ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದ್ದು ನಾಳೆ ಸಂಕಲ್ಪ ಸಮಾವೇಶವು ಭಾರತೀಯ ಜನತಾ ಪಾರ್ಟಿ ಧಾರವಾಡ 71 ರ ನೇತೃತ್ವದಲ್ಲಿ ನಡೆಯಲಿದೆ. ಸಾಯಿ ಅರಣ್ಯ ಸಭಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆ ಯುತ್ತಿರುವ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಮಹೇಶ್ ತೆಂಗಿನಕಾಯಿ ಇವರೊಂದಿಗೆ ಅನೇಕ ಗಣ್ಯರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಜಿಲ್ಲೆಯ ಕಾರ್ಯಕರ್ತ ಬಂಧುಗಳು ಮುಖಂಡರು, ಪಕ್ಷದ ಅಭಿಮಾನಿ ಗಳು, ಯುವ ಮಿತ್ರರು, ಮಾತಾ ಭಗಿನಿಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶಾಸಕ ಅಮೃತ ದೇಸಾಯಿ ಮತ್ತು ಗ್ರಾಮೀಣ ಬಿಜೆಪಿ ಘಟಕದ ಸರ್ವ ಸದಸ್ಯರು ವಕ್ತಾರರು ವಿನಂತಿಯನ್ನು ಮಾಡಿಕೊಂಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk