ಧಾರವಾಡದ ಮಾರ್ಕೊ ಪೋಲೊ ಕಾರ್ಮಿಕರ ಸಮಸ್ಯೆ ಅಂತ್ಯ ಹಾಡಿದ ಶಾಸಕ ಅಮೃತ ದೇಸಾಯಿ ಸಚಿವರೊಂದಿಗೆ ತುರ್ತು ಸಭೆ ಮಾಡಿ ಸಮಸ್ಯೆ ಗಳಿಗೆ ಅಂತ್ಯ ಹಾಡಿದ ಶಾಸಕರು…..

Suddi Sante Desk

ಬೆಂಗಳೂರು –

ಧಾರವಾಡದ ಮಾರ್ಕೋ ಪೋಲೋ ಕಾರ್ಮಿಕರ ಬಹು ದಿನಗಳ ಸಮಸ್ಯೆ ಬೇಡಿಕೆಗಳ ಕುರಿತು ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಬೆಂಗಳೂರಿ ನಲ್ಲಿ ಸಭೆ ಮಾಡಿದರು.ವಿಧಾನ ಸೌಧ ದಲ್ಲಿ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ ರೊಂದಿಗೆ ಮಹತ್ವದ ಸಭೆ ಮಾಡಿ ಚರ್ಚೆ ಮಾಟಿದರು.ಕ್ಷೇತ್ರದ ಟಾಟಾ ಮಾರ್ಕೋಪೋಲೋ ಕಂಪನಿಯ ಆಡಳಿತ ಹಾಗು ಕಾರ್ಮಿಕ ಮಂಡಳಿಯವ ರೊಂದಿಗೆ ಸಭೆ ನಡೆಸಿ ಅವರ ನಡುವಿನ ತೊಂದರೆಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸಲಾಯಿತು.

ಈ ಚರ್ಚೆಯ ನಂತರ ಕಂಪನಿಯ ಆಡಳಿತ ಮಂಡಳಿಯ ವರು ಹಾಗೂ ಕಾರ್ಮಿಕರು ಸಮ್ಮತಿ ಸೂಚಿಸಿ ಪುನಃ ಕಂಪನಿಗೆ ತೆರಳುತ್ತಿರುವ ಕಾರ್ಮಿಕರಿಗೆ ಅಭಿನಂದನೆಗಳು ಮತ್ತು ಈ ತೊಂದರೆ ನಿವಾರಿಸಲು ಸಹಕರಿಸಿದ ರಾಜ್ಯ ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರ ಅವರಿಗೆ ಶಾಸಕ ಅಮೃತ ದೇಸಾಯಿ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸಿ ದರು‌

ಕಾರ್ಮಿಕರು ಮತ್ತು ಮಾಲಿಕರು ನಮ್ಮ ಕೈಗಾರಿಕಾ ಪ್ರದೇಶದ ಎರಡು ಕಣ್ಣುಗಳಿದ್ದಂತೆ ಮುಂಬರುವ ದಿನಗಳಲ್ಲಿ ತಮ್ಮ ಶ್ರಮದಿಂದ ದೇಶದ ಆರ್ಥಿಕತೆಯ ಎತ್ತರಕ್ಕೆ ಕೊಂಡೊಯ್ಯಬೇಕೆಂದೂ ಹರಸುತ್ತೇನೆ ಎಂದು ಶಾಸಕ ಅಮೃತ ದೇಸಾಯಿ ಅವರು ಹೇಳಿದರು‌.ಇನ್ನೂ ಈ ಒಂದು ಸಭೆಯಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿ ಗಳು ಸಂಸ್ಥೆಯ ಆಡಳಿತ ಮಂಡಳಿಯವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.