ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಅಮೃತ ದೇಸಾಯಿ ಮಾಜಿ ಶಾಸಕಿ ಸೀಮಾ ಮಸೂತಿ ಸೇರಿದಂತೆ ಹಲವರು ಉಪಸ್ಥಿತಿ…..

Suddi Sante Desk

ಧಾರವಾಡ –

  • ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗ, ಧಾರವಾಡ ಅನುದಾನದ ಅಡಿಯಲ್ಲಿ ಅಂದಾಜು ಮೊತ್ತ 1.35 ಕೋಟಿ ಅನುದಾನದಲ್ಲಿ ಧಾರವಾಡ ತಾಲೂಕಿನ ಲೋಕುರ ಗ್ರಾಮದಲ್ಲಿ ಸ ಹಿ ಪ್ರಾ ಶಾಲೆ ಯಲ್ಲಿ 10 ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು

ಗ್ರಾಮದಲ್ಲಿ ವ್ಯಾಯಾಮ(ಜಿಮ್) ಶಾಲಾ ನಿರ್ಮಾಣ ಕಾಮಗಾರಿ.ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯಿಂದ ಮನೆ ಮನೆಗೆ ಗಂಗೆ ಯೋಜನೆ ಯಡಿ ಅಂದಾಜು 1.4 ಕೋಟಿ ಅನುದಾನದಲ್ಲಿ ಕುಡಿ ಯುವ ನೀರು ಪೂರೈಸುವ ಯೋಜನೆಲೋಕೋಪಯೋಗಿ ಇಲಾಖೆಯಿಂದ ನಿರ್ಮಿತವಾದ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿದರು.ಇದೇ ವೇಳೆ ಅಮೃತ್ ದೇಸಾಯಿ ಗೆಳೆ ಯರ ಬಳಗದಿಂದ ಹಮ್ಮಿಕೊಂಡ ಆಶಾ ಅಂಗನವಾಡಿ ಮತ್ತು ಪಂಚಾಯತ ಸಿಬ್ಬಂದಿಗಳಿಗೆ ಪ್ರಶಂಶನಾ ಪತ್ರ ಹಾಗು ಸಹಾಯಧನ ವಿತರಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಮಾಜಿ ಶಾಸಕಿ ಶ್ರೀಮತಿ ಸೀಮಾ ಮಸೂತಿ,ತಹಶೀಲ್ದಾರರಾದ್,ಸಂತೋಷ ಬಿರಾದಾರ, ಮಂಜುನಾಥ ನರಸಿಂಗನವರ,ಚಂಬಣ್ಣಾ ಬಾಗಲಕೋಟಿ, ಬಸವರಾಜ ಹಿರೇಹಳ್ಳಿ,ಧರನು ಬಿಲ್ಲನ್ನವರ.ದ್ಯಾಮಣ್ಣ ನಂದೆಣ್ಣವರ,ದ್ಯಾವಪ್ಪ ಚಿಕ್ಕನಿ,ಸುರೇಶ ಛಬ್ಬಿ ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.