ಹುಟ್ಟು ಹಬ್ಬದ ದಿನದಂದೇ ನೇತ್ರದಾನ ನೋಂದಣಿ ಮಾಡಿದ ಶಾಸಕ ಅಮೃತ ದೇಸಾಯಿ ದಂಪತಿಗಳು – ವೇದಿಕೆಯ ಮೇಲೆ ದಾಖಲೆಗಳಿಗೆ ಸಹಿ ಮಾಡಿ ಮಾದರಿಯಾದರು ಧಣಿ ಪರಿವಾರದವರು…..

Suddi Sante Desk

ಧಾರವಾಡ –

ಸಾಮಾನ್ಯವಾಗಿ ರಾಜಕೀಯ ನಾಯಕರು ತಮ್ಮ ಹುಟ್ಟು ಹಬ್ಬವನ್ನು ಹಾಗೇ ಹೀಗೆ ಆಚರಣೆ ಮಾಡಿಕೊಳ್ಳೊದನ್ನು ನೋಡಿದ್ದೇವೆ ಕೇಳಿದ್ದೇವೆ ಆದರೆ ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ತಮ್ಮ ಹುಟ್ಟು ಹಬ್ಬ ವನ್ನು ವಿಶೇಷವಾಗಿ ಅರ್ಥಪೂರ್ಣವಾಗಿ ಆಚರಣೆ ಮಾಡಿಕೊಂಡಿದ್ದಾರೆ.

ಹೌದು ಅದು ಯಾವುದೇ ಒಂದು ಅದ್ದೂರಿಯಾದ ವೇದಿಕೆ ಯ ಕಾರ್ಯಕ್ರಮ ಮಾಡದೇ ಕ್ಷೇತ್ರದ ಅಭಿಮಾನಿಗಳು ಆಪ್ತರು ಪಕ್ಷದ ಕಾರ್ಯಕರ್ತರು ಮುಖಂಡರ ಮಧ್ಯೆ ಪತ್ನಿ ಪ್ರೀಯಾ ದೇಸಾಯಿ ಅವರೊಂದಿಗೆ ಹುಟ್ಟು ಹಬ್ಬದ ದಿನ ದಂದೇ ನೇತ್ರದಾನದ ನೋಂದಣಿ ಮಾಡಿಕೊಂಡಿದ್ದಾರೆ.

ಹುಟ್ಟು ಹಬ್ಬದ ಹಿನ್ನಲೆಯಲ್ಲಿ ನಗರದಲ್ಲಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು ಈ ಒಂದು ವೇದಿಕೆಯ ಮೇಲೆ ಆರಂಭದಲ್ಲಿ ಶಾಸಕ ಅಮೃತ ದೇಸಾಯಿ ಪತ್ನಿಯೊಂದಿಗೆ ನೇತ್ರದಾನಕ್ಕೆ ಸಹಿ ಮಾಡಿ ಮಾದರಿಯಾಗಿ ನೇತ್ರದಾನಕ್ಕೆ ಚಾಲನೆ ನೀಡಿದರು. ಇದೇ ವೇಲೆ ರಕ್ತದಾನ ಶಿಬಿರಕ್ಕೂ ಕೂಡಾ ಚಾಲನೆ ನೀಡಿದರು. ಇದರೊಂದಿಗೆ ಶಾಸಕ ಅಮೃತ ದೇಸಾಯಿ ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಅರ್ಥ ಪೂರ್ಣವಾಗಿ ಆಚರಣೆ ಮಾಡಿಕೊಂಡು ಹೇಳಿದಂತೆ ನಡೆದುಕೊಂಡು ಮಾದರಿಯಾಗಿದ್ದಾರೆ.

ರಾಜಕಾರಣದೊಂದಿಗೆ ರಾಜಕೀಯ ನಾಯಕರಿಗೆ ಸಾಮಾಜಿಕ ಜವಾಬ್ದಾರಿ ಹೇಗಿರಬೇಕು ಎಂಬೊದನ್ನು ತೋರಿಸಿಕೊಟ್ಟು ಮಾದರಿಯಾದರು.ವೇದಿಕೆಯ ಮೇಲೆ ಹು ಧಾ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ,ಮಾಜಿ ಶಾಸಕರಾದ ಎ ಬಿ ದೇಸಾಯಿ, ರಾಜ್ಯೋತ್ಸವ ಪ್ರಶಸ್ತಿ ಪುರಷ್ಕ್ರತರಾದ ಡಾ ಎಸ್ ಆರ್ ರಾಮನಗೌಡರ,ಪಾಲಿಕೆಯ ಸದಸ್ಯರಾದ ಶಂಕರ ಶೇಳಕೆ,ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.