ಕ್ಷೇತ್ರದಲ್ಲಿನ 20 ವರ್ಷದ ಸಾರ್ವಜನಿಕರ ಸಮಸ್ಯೆ ಗೆ ಮುಕ್ತಿ ನೀಡಿದ ಶಾಸಕ ಅರವಿಂದ ಬೆಲ್ಲದ ಮತ್ತೊಂದು ಹಂತದಲ್ಲಿ ಹಕ್ಕು ಪತ್ರ ವಿತರಣೆ…..

Suddi Sante Desk

ಹುಬ್ಬಳ್ಳಿ ಧಾರವಾಡ –

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಮತ್ತೊಂದು ಹಂತದಲ್ಲಿ ಕ್ಷೇತ್ರದಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಿದ್ದಾರೆ ಹೌದು ಕಳೆದ 20 ವರ್ಷಗಳಿಂದ ಸಮಸ್ಯೆ ಯಿಂದ ಪರದಾಡುತ್ತಿದ್ದ ನಿವಾಸಿಗಳಿಗೆ ಇಂದು ಶಾಶ್ವತ ಮುಕ್ತಿ ನೀಡಿದರು.

ಹೌದು ಈಗಾಗಲೇ ಮೊದಲ ಹಂತದಲ್ಲಿ ಒಂದಿಷ್ಟು ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿ ಶಾಶ್ವತ ಪರಿಹಾರ ನೀಡಿದ್ದ ಶಾಸಕರು ಇಂದು ಮತ್ತೊಂದು ಹಂತದಲ್ಲಿ ಹುಬ್ಬಳ್ಳಿ ಶಹರದ ಅಮರಗೋಳ ಆಶ್ರಯ ಬಡಾವಣೆಯ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಿದರು

ಸುಮಾರು 20 ವರ್ಷಗಳಿಂದ ವಾಸಿಸುತ್ತಿರುವ ಅರ್ಹ ಬಡ ಫಲಾನುಭವಿಗಳಿಗೆ ಅಡಮಾನ ಋಣ ಮುಕ್ತ ಪತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಅಜ್ಜಪ್ಪ ಹೊರಕೇರಿ,ಕೆ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಹೊರಕೇರಿ,ಮುಖಂಡರಾದ ರುದ್ರಪ್ಪ ಬೆಟಗೇರಿ,ಮಲ್ಲೇಶ್ ಇದ್ಲಿ,ಸಂತೋಷ ಸೋಗಿ ಸೇರಿದಂತೆ ಇನ್ನಿತರರು ಹಾಗೂ ಮೂಲ ಫಲಾನುಭವಿಗಳು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.