ಕಾಂಗ್ರೇಸ್ ಪಕ್ಷ ಸೇರ್ಪಡೆ ಕುರಿತಂತೆ ಶಾಸಕ ಅರವಿಂದ ಬೆಲ್ಲದ ಸ್ಪಷ್ಟನೆ – ತಿಂಗಳ ಕೊನೆ ಯಲ್ಲಿ ಯಾರೆಲ್ಲ ನಮ್ಮ ಪಕ್ಷಕ್ಕೆ ಬರುತ್ತಾರೆಂದು ಗೊತ್ತಾಗಲಿದೆ ಎಂದರು ಶಾಸಕರು…..

Suddi Sante Desk

ಧಾರವಾಡ –

ಕಾಂಗ್ರೇಸ್ ಪಕ್ಷ ಸೇರ್ಪಡೆ ಕುರಿತಂತೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಸ್ಪಷ್ಟನೆ ನೀಡಿದ್ದಾರೆ.ಧಾರವಾಡದಲ್ಲಿ ಮಾತನಾಡಿದ ಅವರು ನಾನು ಕಾಂಗ್ರೆಸ್ ಸೇರುವೆನೆಂದು ವದಂತಿ ಹಬ್ಬಿಸುತ್ತಿದ್ದಾರೆ ಇದು ಸುಳ್ಳು ಸುದ್ದಿ ನಮಗೆ ಬೇಡವಾದವರು ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು.

ಇನ್ನೂ ಬಿಜೆಪಿ ನನ್ನ ಗುರುತಿಸಿ ಟಿಕೆಟ್ ಕೊಟ್ಟು ಶಾಸಕನ ನ್ನಾಗಿ ಮಾಡಿದೆ ಎರಡು ಸಲ ನಾನು ಶಾಸಕನಾದವನು ನಮಗೆ ಬೇಡವಾದರೂ ಬೇರೆ ಬೇರೆ ವಿಧಾನ ಮೂಲಕ ಸುದ್ದಿ ಹಬ್ಬಿಸುತ್ತಿದ್ದಾರೆ,ಈ ಬಗ್ಗೆ ಪಕ್ಷದ ಹಿರಿಯರ ಜೊತೆ ಯೂ ಮಾತನಾಡಿದ್ದೇನೆ.ಅಂತಹ ಸುದ್ದಿಗಳಿಗೆ ಲಕ್ಷ್ಯ ಕೊಡುವುದಿಲ್ಲವೆಂದು ಭರವಸೆ ನೀಡಿದ್ದಾರೆ ಎಂದರು.

ಪಕ್ಷದ ಹಿರಿಯರು ಭರವಸೆ ಕೊಟ್ಟಿದ್ದಾರೆ ನಾನು ಎರಡೇ ಸಲ ಶಾಸಕನಾಗಿ ಸಾಕಷ್ಟು ಬೆಳೆದಿದ್ದೇನೆ ಸಹಜವಾಗಿ ಇದು ಕೆಲವರ ಕಣ್ಣು ಕುಕ್ಕುತ್ತಿದೆ.ನಮ್ಮ ಅಭಿವೃದ್ಧಿ ಸಹಿಸಲಾಗದ ವರು ಹೀಗೆಲ್ಲ ಮಾಡುತ್ತಿದ್ದಾರೆ.ಬೇರೆಯವರೇ ನಮ್ಮ ಪಕ್ಷಕ್ಕೆ ಬರಲಿದ್ದಾರೆ.ನಮ್ಮಲ್ಲಿ ಯಾರೂ ಪಕ್ಷ ಬಿಟ್ಟು ಹೋಗುವು ದಿಲ್ಲ.ತಿಂಗಳ ಕೊನೆಯಲ್ಲಿ ಯಾರೆಲ್ಲ ನಮ್ಮ ಪಕ್ಷಕ್ಕೆ ಬರುತ್ತಾ ರೆಂದು ಗೊತ್ತಾಗಲಿದೆ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.