ಶಾಸಕರ ಕಾರಿಗೆ ಕಲ್ಲು – ರಾತ್ರಿ ಸಮಯದಲ್ಲಿ ಮನೆಗೆ ಬರುವಾಗ ಕಾರಿಗೆ ಕಲ್ಲು ದೂರು ದಾಖಲು – ಶಾಸಕರ ಸಂಬಂಧಿಕರಿಂದಲೇ ಅಟ್ಯಾಕ್

Suddi Sante Desk

ಕಲಘಟಗಿ –

ಕಲಘಟಗಿ ಶಾಸಕ ಸಿ ಎಂ ನಿಂಬಣ್ಣವರ ಕಾರಿಗೆ ಕಲ್ಲು ಹೊಗೆಯಲಾಗಿದೆ. ಕಲಘಟಗಿ ತಾಲ್ಲೂಕಿನ ಸಂಗದೇವರಕೊಪ್ಪ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.

ಶನಿವಾರ ತಡರಾತ್ರಿ ಈ ಒಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಶಾಸಕರ ಪುತ್ರ ಶಶಿಧರ ನಿಂಬಣ್ಣವರ ಮತ್ತು ನಾಗರಾಜ ನಿಂಬಣ್ಣನರ ಸೇರಿ ಮಡಕಿಹೊನ್ನಳ್ಳಿ ಗ್ರಾಮದಿಂದ ಬರುವಾಗ ಸಂಗದೇವನಕೊಪ್ಪದ ನೀರಿನ ಟ್ಯಾಂಕ್ ಬಳಿ ಕಾರಿಗೆ ಕಲ್ಲು  ಹೊಗೆಯಲಾಗಿದೆ.

ಮಾರುತಿ 800 ಕಾರಿನ ಗ್ರಾಸ್ ಜಖಂ ಆಗಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಆಸ್ತಿ ವಿಚಾರ ಕುರಿತು ಶಾಸಕರ ಸಂಬಂಧಿಗಳೇ ಶಾಸಕರ ಮಗನ ಕಾರಿನ ಮೇಲೆ ಅಟ್ಯಾಕ್ ಮಾಡಿದ್ದಾರೆ.

ಶಂಕ್ರಪ್ಪ , ಮಹಾಂತೇಶ, ಸಂಗಮೇಶ ಮೂವರ ಮೇಲೆ ದೂರು ದಾಖಲಾಗಿದೆ.ಸದ್ಯ ದೂರು ದಾಖಲು ಮಾಡಿಕೊಂಡಿರುವ ಕಲಘಟಗಿ ಪೊಲೀಸರು ತನಿಖೆ ಮಾಡತಾ ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.