ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದವರನ್ನು ಹೆಡೆಮುರಿ ಕಟ್ಟುತ್ತಿರುವ ಪೊಲೀಸರು 15 ಕ್ಕೂ ಹೆಚ್ಚು ಯುವಕರ ಬಂಧನ…..

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯಲ್ಲಿನ ಗಲಭೆ ಗಲಾಟೆ ಮಾಡಿ ಘಟನೆಗೆ ಕಾರಣರಾಗಿದ್ದ ಒಬ್ಬೊಬ್ಬರ‌ನ್ನು ಪೊಲೀಸ್ ಠಾಣೆಗೆ ಪೊಲೀಸರು ಕರೆದುಕೊಂಡು ಬರುತ್ತಿ ದ್ದಾರೆ ಖಾಕಿ ಪಡೆ ಹೌದು ಸಧ್ಯ 15 ಕ್ಕೂ ಹೆಚ್ಚು ಕಿಡಗೇಡಿಗ ಳನ್ನ ಹಳೇ ಹುಬ್ಬಳ್ಳಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ ಪೊಲೀಸರು.

ಗಲಾಟೆ ನಡೆದ ನಂತರ ರಾತ್ರಿಯಿಂದ ಕಿಡಿಗೇಡಿಗಳನ್ನು ಹೆಡೆಮುರಿ ಕಟ್ಟುತ್ತಿದ್ದಾರೆ ಖಾಕಿ ಪಡೆ.ರಾತ್ರಿ ಕಲ್ಲು ತುರಾಟ ಮಾಡಿ ಪೊಲೀಸ್ ವಾಹನಗಳನ್ನು ಪಲ್ಟಿ ಮಾಡಿ ದೊಡ್ಡ ಪ್ರಮಾಣದ ಗಲಾಟೆ ಮಾಡಿದ್ದರು ಕಿಡಗೇಡಿಗಳು.

ಅತ್ತ ಪೊಲೀಸರು ಈ ಒಂದು ಕಾರ್ಯ ಮಾಡುತ್ತಿದ್ದರೆ ಇತ್ತ ಹಳೇ ಹುಬ್ಬಳ್ಳಿ ವೃತ್ತದಲ್ಲಿ ಪಾಲಿಕೆಯಿಂದ ಸ್ವಚ್ಛತೆ ಕಾರ್ಯ ನಡೆಯುತ್ತಿದೆ.ಗಲಾಟೆ ಗದ್ದಲ ನಡೆದ ಸ್ಥಳವನ್ನು ಕಾರ್ಮಿ ಕರು ಸ್ವಚ್ಚತೆ ಮಾಡುತ್ತಿದ್ದಾರೆ

ಇತ್ತ ಪೊಲೀಸ್ ಆಯುಕ್ತರ ಸೂಚನೆ ಹಿನ್ನಲೆ ಯಲ್ಲಿ ಸ್ಥಳದಲ್ಲಿ ಡಿಸಿಪಿ ಸಾಹಿಲ್ ಬಾಗ್ಲಾ ಮುಕ್ಕಾಂ ಹೂಡಿದ್ದಾರೆ ಇನ್ನೂ ಈ ಒಂದು ವಿಚಾರ ಕುರಿತು ಪೊಲೀಸ್ ಆಯುಕ್ತರು ಹೇಳಿದ್ದು ಹೀಗೆ

ರಾತ್ರಿ ರಸ್ತೆ ಮೇಲೆ ಬಿಸಾಡಲಾಗಿದ್ದ ಕಲ್ಲು,ಪುಡಿ ಹಾಗೇ ಈ ಒಂದು ಪುಡಿಯಿಂದ ಗ್ಲಾಸ್ ಕ್ಲಿನ್ ಮಾಡುತ್ತಿದ್ದು ರಸ್ತೆ ತುಂಬೆಲ್ಲಾ ಬಿದ್ದಿರುವ ಗಾಜಿನ ಚೂರುಗಳನ್ನು ತಗೆಯು ತ್ತಿದ್ದಾರೆ ಪೌರ ಕಾರ್ಮಿಕರು

ದೊಡ್ಡ ಪ್ರಮಾಣದಲ್ಲಿ ನಡೆದ ಈ ಒಂದು ಘಟನೆ ಯಿಂದಾಗಿ ರಾತ್ರಿಯಿಂದ ಠಾಣೆಯಲ್ಲೆ ಇದ್ದಾರೆ ಡಿಸಿಪಿ ಸಾಹಿಲ್ ಅವರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.