ನವರಾತ್ರಿ ಅಂಗವಾಗಿ ಧಾರವಾಡದ ದುರ್ಗಾ ದೌಡ ಆಚರಣಾ ಸಮಿತಿ ಧಾರವಾಡ ಹಮ್ಮಿಕೊಂಡಿದ್ದ ದುರ್ಗಾ ದೌಡ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ತಾಯಿ ದುರ್ಗಾ ಪರಮೇಶ್ವರಿಯ‌ ಆಶೀರ್ವಾದ ಪಡೆದ ಬಿಜೆಪಿ ನಾಯಕರು

Suddi Sante Desk
ನವರಾತ್ರಿ ಅಂಗವಾಗಿ ಧಾರವಾಡದ ದುರ್ಗಾ ದೌಡ ಆಚರಣಾ ಸಮಿತಿ ಧಾರವಾಡ ಹಮ್ಮಿಕೊಂಡಿದ್ದ ದುರ್ಗಾ ದೌಡ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ತಾಯಿ ದುರ್ಗಾ ಪರಮೇಶ್ವರಿಯ‌ ಆಶೀರ್ವಾದ ಪಡೆದ ಬಿಜೆಪಿ ನಾಯಕರು

ಧಾರವಾಡ –

 

ಇಂದು ನವರಾತ್ರಿ ಅಂಗವಾಗಿ ಧಾರವಾಡದಲ್ಲಿ ದುರ್ಗಾ ದೌಡ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ದುರ್ಗಾ ದೌಡ ಶೋಭಾ ಯಾತ್ರೆಯಲ್ಲಿ ಶಾಸಕ ಅಮೃತ ದೇಸಾಯಿ,ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ, ಬಯಲು ಸೀಮೆ ಪ್ರದೇಶದ ಅಧ್ಯಕ್ಷ ತವನಪ್ಪ ಅಷ್ಟಗಿ ಸೇರಿದಂತೆ ಹಲವರು ಪಾಲ್ಗೊಂಡು ತಾಯಿ ದುರ್ಗಾ ಪರಮೇಶ್ವರಿಯ‌ ಆಶೀರ್ವಾದ ಪಡೆದುಕೊಂಡರು

 

ಇದೇ ವೇಳೆ ನಗರದ ಹಲವೆಡೆ ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಒಂದಿಷ್ಟು ಹೆಜ್ಜೆ ಹಾಕಿದರು. ಇದರೊಂದಿಗೆ ನವರಾತ್ರಿ ಹಬ್ಬವನ್ನು ಆಚರಣೆ ಮಾಡಿದರು

 

ಈ ಸಂದರ್ಭದಲ್ಲಿ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ತವನಪ್ಪ ಅಷ್ಟಗಿ,ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರ ರಾದ ಈರೇಶ ಅಂಚಟಗೇರಿ,ಮಾಜಿ ಶಾಸಕರಾದ ಶ್ರೀಮತಿ ಸೀಮಾ ಅಶೋಕ ಮಸೂತಿ,ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ನಿತೀನ್ ಇಂಡಿ,ಭಾರತೀಯ ಜನತಾ ಪಾರ್ಟಿಯ ನಗರ ಮಂಡಲ ಅಧ್ಯಕ್ಷರಾದ ಸುನೀಲ ಮೋರೆ ಹಾಗೂ ಹಲವು ಮುಖಂಡರು ಮತ್ತು ಭಕ್ತ ವೃಂದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.