ಕಡಪಟ್ಟಿಯಲ್ಲಿ ಕೊಲೆ – ಮನೆಯ ಪಕ್ಕದಲ್ಲಿನ ಜಾಗದ ಸಲುವಾಗಿ ಆರಂಭಗೊಂಡ ಜಗಳ ಕೊಲೆ ಯಲ್ಲಿ ಅಂತ್ಯ

Suddi Sante Desk

ಹುಬ್ಬಳ್ಳಿ –

ಮನೆಯ ಪಕ್ಕದಲ್ಲಿನ ಜಾಗೆಯ ವಿಚಾರಕ್ಕಾಗಿ ಆರಂಭಗೊಂಡ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಕುಂದಗೋಳ ತಾಲ್ಲೂಕಿನ ಕಡಪಟ್ಟಿಯಲ್ಲಿ ನಡೆದಿದೆ. ಕಡಪಟ್ಟಿ ಗ್ರಾಮದಲ್ಲಿನ ಶಂಕ್ರಪ್ಪ ಬುದಿಹಾಳ ಮತ್ತು ಶ್ರೀಶೈಲಪ್ಪ ಬಳಿಗಾರ ಇಬ್ಬರ ನಡುವೆ ಮನೆಯ ಪಕ್ಕದಲ್ಲಿನ ಜಾಗೆಯ ವಿಚಾರ ಕ್ಕಾಗಿ ಆಗಾಗ ಜಗಳವಾಗುತ್ತಿತ್ತು. ನಿನ್ನೇ ಮತ್ತೆ ಇಬ್ಬರ ನಡುವೆ ಜಗಳ ಆರಂಭಗೊಂಡಿದ್ದು ಮಾತಿಗೆ ಮಾತು ಬೆಳೆದು ಕೊನೆಗೆ ಯಲ್ಲಪ್ಪ ಬುದಿಹಾಳ ದೊಣ್ಣೆ ಯಿಂದ ಶ್ರೀಶೈಲಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ.

ತೀವ್ರವಾಗಿ ಗಾಯಗೊಂಡ ಶ್ರೀಶೈಲಪ್ಪ ಸಾವಿಗೀಡಾಗಿದ್ದಾರೆ.ಇನ್ನೂ ಸುದ್ದಿ ತಿಳಿದ ಕುಂದಗೋಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಕುರಿತಂತೆ ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಕುಂದಗೋಳ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.