ಕುಲಪತಿಗೆ ಕಪ್ಪು ಮಸಿ ಬಳಿದ ವಿದ್ಯಾರ್ಥಿಗಳು – ವಿದ್ಯಾರ್ಥಿ ಗಳನ್ನು ವಶಕ್ಕೆ ಪಡೆದ ನವನಗರ ಪೊಲೀಸರು…..

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿಯ ನವನಗರದಲ್ಲಿನ ಕಾನೂನು ವಿಶ್ವವಿದ್ಯಾಲ ಯದ ವಿದ್ಯಾರ್ಥಿಗಳ ಹೋರಾಟ ಅತಿರೇಕಕ್ಕೆ ತಲುಪು ತ್ತಿದೆ.ಹೌದು ಕಳೆದ ಹಲವು ದಿನಗಳಿಂದ ವಿವಿಧ ಬೇಡಿಕೆಗ ಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವ ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.ಇಂದು ಕಾನೂನು ವಿವಿ ಕುಲಪತಿಗೆ ಕಪ್ಪು ಮಸಿಯನ್ನು ಎರಚಿದ್ದಾರೆ

ವಿದ್ಯಾರ್ಥಿಗಳು ನವನಗರದ ಕಾನೂನು ವಿವಿಯ ಆವರಣ ದಲ್ಲಿ ನಡೆಯುತ್ತಿದ್ದ ಈ ಒಂದು ವಿದ್ಯಾರ್ಥಿಗಳ ಪ್ರತಿಭಟನೆ ಯಲ್ಲಿ ಇಂದು ಈ ಒಂದು ಘಟನೆ ನಡೆದಿದೆ.ವಿವಿ ಯ ಕುಲಪತಿ ಡಾ.ಪಿ ಈಶ್ವರ್ ಭಟ್ ಮೇಲೆ ಮಸಿ ಎರಚಿದ್ದಾರೆ ವಿದ್ಯಾರ್ಥಿಗಳು.

ಕಳೆದ 30 ದಿನಗಳಿಂದ ನಡೆಯುತ್ತಿದೆ ಈ ಒಂದು ವಿದ್ಯಾರ್ಥಿ ಗಳ ಪ್ರತಿಭಟನೆಗೆ ವಿವಿಧ ವಿದ್ಯಾರ್ಥಿ ಸಂಘಟನೆಯಿಂದ ಸಾಥ್ ಸಿಕ್ಕಿದ್ದು ಮನವಿ ತಗೆದುಕೊಳ್ಳಲು ಬಂದ ಕುಲಪತಿ ಯವರಿಗೆ ಮಸಿ ಎರಚಿದಲಾಗಿದೆ.15 ಜನ ವಿದ್ಯಾರ್ಥಿ ಗಳನ್ನು ಬಂಧಿಸಿದ್ದಾರೆ ನವನಗರ ಪೊಲೀಸರು. ವಿದ್ಯಾರ್ಥಿ ಗಳ ಬೇಡಿಕೆಗೆ ಉತ್ತರ ಕೊಡದೇ ಎದ್ದು ಹೋಗಿದ್ದಕ್ಕೆ ಕಪ್ಪು ಮಸಿ ಎರಚಿ ಅವಮಾನಿಸಿದ್ದಾರೆ ವಿದ್ಯಾರ್ಥಿಗಳು ಸದ್ಯ ಕಪ್ಪು ಮಸಿ ಎರಚಿದವರನ್ನು ಬಂಧಿಸಿ ಕರೆದೊಯ್ದಿದ್ದಾರೆ ನವನಗರ ಠಾಣೆಯ ಪೊಲೀಸರು

ವಿವಿ ಯಿಂದ ಎಲ್ಲಾ ವಿದ್ಯಾರ್ಥಿಗಳನ್ನ ಪ್ರಮೋಟ್ ಮಾಡಬೇಕೆಂದು ಬೇಡಿಕೆ ಇಟ್ಟಿದ್ದು 3 ನೇ ವರ್ಷದ ವಿದ್ಯಾರ್ಥಿಗಳನ್ನ ಈಗಾಗಲೇ ಪ್ರಮೋಟ್ ಮಾಡಿದ್ದಾರೆ ಕಾನೂನು ವಿವಿ ಯವರು.ಸದ್ಯ ಅದೇ ರೀತಿಯಲ್ಲಿ 5 ನೇ ವರ್ಷದ ವಿದ್ಯಾರ್ಥಿಗಳನ್ನು ಮುಂಬಡ್ತಿ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ವಿದ್ಯಾರ್ಥಿಗಳು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.