ಧಾರವಾಡದ ಮಮ್ಮಿಗಟ್ಟಿ ಯಲ್ಲಿ ನವ ವಿವಾಹಿತೆ ನೇಣಿಗೆ ಶರಣು

Suddi Sante Desk

ಧಾರವಾಡ –

ನವ ವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡದ ಮಮ್ಮಿಗಟ್ಟಿಯಲ್ಲಿ ನಡೆದಿದೆ.ಧಾರವಾಡ ತಾಲೂಕಿನ ಮುಮ್ಮಿಗಟ್ಟಿಯಲ್ಲಿ ಬೆಳ್ಳಂ ಬೆಳಿಗ್ಗೆ ಈ ಒಂದು ಘಟನೆ ನಡೆದಿದೆ.

ರಂಜಿತಾ ಹಂಚಿನಮನಿ ನೇಣು ಹಾಕಿಕೊಂಡ ಮಹಿಳೆಯಾಗಿದ್ದಾಳೆ.ಎರಡು ತಿಂಗಳ ಹಿಂದಷ್ಟೇ ರಂಜಿತಾ ಮುಮ್ಮಿಗಟ್ಟಿಯ ಮಂಜುನಾಥ ಹಂಚಿನಮನಿ ಜೊತೆ ವಿವಾಹವಾಗಿದ್ದರು.

ಗಂಡನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ರಂಜಿತಾ ಸೀರೆಯಿಂದ ನೇಣು ಬಿಗಿದುಕೊಂಡಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ‌.

ಸಾವಿಗೆ ಗಂಡನ ಮನೆಯವರಿಂದ ಕಿರುಕುಳ ಆರೋಪ ಕೇಳಿ ಬಂದಿದೆ.ಮೃತ ರಂಜಿತ ಪಾಲಕರಿಂದ ಆರೋಪವು ಕೇಳಿ ಬಂದಿದ್ದು ಗರಗ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.