LIVE TV LocalCrimeNationalInternationalPoliticsEducationTechnologyEntertainmentSportsFeature
State News

ಡಿಗ್ರಿ ಯಲ್ಲಿ ಎರಡು ಬಾರಿ ಫೇಲ್‌ ಕೆಪಿಎಸ್ ಸಿ ಪರೀಕ್ಷೆಯಲ್ಲಿ ಟಾಪರ್.....ಇದು KPSC ಪರೀಕ್ಷೆ ಪ್ರಪಂಚ.....

ಬೆಂಗಳೂರು -

ದುಡ್ಡು ಕೊಟ್ಟರೆ ಏನು ಆದರೂ ಆಗುತ್ತವೆ ಎಂಬುದಕ್ಕೆ ಕೆಪಿಎಸ್ ಸಿ ಪರೀಕ್ಷೆ ಯಲ್ಲಿನ ಗೋಲ್ ಮಾಲ್ ಸಾಕ್ಷಿ ಯಾಗಿದ್ದು ಸಧ್ಯ ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಡಿಗ್ರಿಯಲ್ಲಿ ಎರಡು ಬಾರಿ ಫೇಲ್‌ ಆಗಿ ಕೆಪಿಎಸ್ ಸಿ ಪರೀಕ್ಷೆಯಲ್ಲಿ ಟಾಪ್‌ 2 ಅಭ್ಯರ್ಥಿಯ 'ಎಕ್ಸಾಂ ಮಿರಾಕಲ್‌'ಗೆ CID ಶಾಕ್ ಆಗಿದ್ದಾರೆ

ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ (KPSC) ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ (CID) ತನಿಖೆ ಮುಂದುವರಿ ದಿರುವ ನಡುವೆಯೇ, ಅಭ್ಯರ್ಥಿಯೊಬ್ಬರ ಶೈಕ್ಷಣಿಕ ದಾಖಲೆಗಳು ಹಲವು ಅನುಮಾನಗಳಿಗೆ ಕಾರಣ ವಾಗಿವೆ.ಪಶುವೈದ್ಯಕೀಯ ಪದವಿ ವ್ಯಾಸಂಗದ ವೇಳೆ ಎರಡು ಬಾರಿ ಅನುತ್ತೀರ್ಣರಾಗಿದ್ದ ಅಭ್ಯರ್ಥಿ, ನೇಮಕಾತಿ ಪರೀಕ್ಷೆಯಲ್ಲಿ ಬರೋಬ್ಬರಿ 600 ಅಂಕ ಗಳಿಗೆ 478 ಅಂಕ ಪಡೆದು ಟಾಪ್‌-2 ರ‍್ಯಾಂಕ್‌ ಪಡೆದಿ ರುವುದು ತನಿಖಾಧಿಕಾರಿಗಳ ಗಮನ ಸೆಳೆದಿದೆ.

ತನಿಖೆಯ ಭಾಗವಾಗಿ ಪರಿಶೀಲಿಸಲಾಗಿರುವ ಅಭ್ಯರ್ಥಿ ಸುಗರೇಶ್ ಜಾಕ್ ಅವರ ಡಿಗ್ರಿ ಅಂಕ ಪಟ್ಟಿಯಲ್ಲಿ ಅವರು ಪದೇಪದೇ ಅನುತ್ತೀರ್ಣ ರಾಗಿರುವ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಆದರೆ ಇದೇ ಅಭ್ಯರ್ಥಿ ಪಶುವೈದ್ಯಾಧಿಕಾರಿ ನೇಮ ಕಾತಿ ಪರೀಕ್ಷೆಯಲ್ಲಿ 600ಕ್ಕೆ 478 ಅಂಕ ಗಳಿಸಿರು ವುದು ಇದೀಗ ಚರ್ಚೆಗೆ ಕಾರಣವಾಗಿದೆ.

ವಿಶೇಷವೆಂದರೆ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳೂ 350 ಅಂಕಗಳ ಗಡಿ ದಾಟಿಲ್ಲ ಎನ್ನಲಾಗುತ್ತಿದ್ದು, ಸುಗರೇಶ್ ಜಾಕ್‌ 478 ಅಂಕ ಗಳಿಸಿರುವುದು ತನಿಖಾಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಅತ್ಯಂತ ಸ್ಪರ್ಧಾತ್ಮಕವಾಗಿರುವ ನೇಮಕಾತಿ ಪರೀಕ್ಷೆಯಲ್ಲಿ ಇಷ್ಟು ಹೆಚ್ಚಿನ ಅಂಕ ಗಳಿಸಿರುವುದರ ಬಗ್ಗೆ ಸಿಐಡಿ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಸುಗರೇಶ್ ಜಾಕ್ ಅವರ ಹಿಂದಿನ ಶೈಕ್ಷಣಿಕ ಸಾಧನೆ ಮತ್ತು ನೇಮಕಾತಿ ಪರೀಕ್ಷೆ ಯ ಫಲಿತಾಂಶದ ನಡುವಿನ ಭಾರೀ ವ್ಯತ್ಯಾಸವೇ ಇದೀಗ ತನಿಖೆಯ ಪ್ರಮುಖ ಅಂಶವಾಗಿದೆ.

ಡಿಗ್ರಿ ವ್ಯಾಸಂಗದ ಸಂದರ್ಭದಲ್ಲಿ ಎರಡು ಬಾರಿ ಫೇಲ್‌ ಆಗಿದ್ದ ಅಭ್ಯರ್ಥಿ ನೇಮಕಾತಿ ಪರೀಕ್ಷೆಯಲ್ಲಿ ಹೇಗೆ ಅಷ್ಟು ಹೆಚ್ಚಿನ ಅಂಕ ಗಳಿಸಿದರು ಎಂಬ ಪ್ರಶ್ನೆ ತನಿಖಾಧಿಕಾರಿಗಳ ಮುಂದಿದೆ.ಇನ್ನು ಈ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ವಿಚಾರವೂ ಮುನ್ನೆಲೆಗೆ ಬಂದಿದೆ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್‌ ಅವರೊಂದಿಗೆ ಸುಗರೇಶ್ ಜಾಕ್‌ ಸಂಬಂಧ ಹೊಂದಿದ್ದಾರೆ ಎನ್ನಲಾಗಿದ್ದು ಈ ಸಂಬಂಧವೂ ತನಿಖೆಯ ವ್ಯಾಪ್ತಿಗೆ ಬಂದಿರುವ ಸಾಧ್ಯತೆ ಇದೆ.

ಶಿವಶಂಕರಪ್ಪ ಸಾಹುಕಾರ್‌ ಅವರ ಪ್ರಭಾವ ಅಥವಾ ಕೃಪಾಕಟಾಕ್ಷದಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ ಎಂಬ ಅನು ಮಾನಗಳು ಕೇಳಿಬಂದಿವೆ.ಆದರೆ ಈ ಆರೋಪಗಳು ಇನ್ನೂ ತನಿಖೆಯ ಹಂತದಲ್ಲಿದ್ದು, ಸಿಐಡಿ ತನಿಖೆ ಯಿಂದಲೇ ವಾಸ್ತವಾಂಶ ಹೊರಬರಬೇಕಿದೆ. ಅಭ್ಯರ್ಥಿಯ ಅಸಾಮಾನ್ಯ ಪರೀಕ್ಷಾ ಫಲಿತಾಂಶಕ್ಕೆ ಕಾರಣವೇನು, ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ ಮತ್ತು ಸಂಬಂಧಿಕರ ಪ್ರಭಾವ ಬಳಕೆಯಾಗಿದೆಯೇ ಎಂಬ ಪ್ರಶ್ನೆಗಳಿಗೆ ತನಿಖೆಯ ಬಳಿಕ ಸ್ಪಷ್ಟ ಉತ್ತರ ಸಿಗುವ ನಿರೀಕ್ಷೆಯಿದೆ.

ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮದ ಆರೋಪ ಈಗಾಗಲೇ ಗಂಭೀರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳು, ಪರೀಕ್ಷಾ ಅಂಕಗಳು ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿನ ವಿವಿಧ ಹಂತಗಳನ್ನು ಸಿಐಡಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎನ್ನ ಲಾಗಿದೆ ಸುಗರೇಶ್ ಜಾಕ್ ಪ್ರಕರಣದಲ್ಲಿನ ಈ ಅಂಕಗಳ ವ್ಯತ್ಯಾಸವೂ ತನಿಖೆಗೆ ಮತ್ತಷ್ಟು ಕುತೂಹಲ ಮೂಡಿಸಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ - ಪ್ರಶಸ್ತಿ ವಿಜೇತ ಶಿಕ್ಷಕರ ಸಂಪೂರ್ಣ ಮಾಹಿತಿ.....ನಾಡಿನ ಜನತೆಗೆ Big Mishra ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು - ನಾಡಿನ ಜನತೆಗೆ ಶುಭ ಕೋರಿದ ಸಂಜಯ ಮಿಶ್ರಾ.....ಶಿಕ್ಷಕಿಯಿಂದ ಅಮಾನವೀಯ ಕೃತ್ಯ.....ಕ್ರಮಕ್ಕೆ ಪೋಷಕರ ಒತ್ತಾಯ.....ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಪೇದೆಗಳು.....IAS ಅಧಿಕಾರಿ ಸೇವೆಯಿಂದ ಅಮಾನತು - ಸೇವೆಯಿಂದ ಅಮಾನತುಗೊಳಿ ಆದೇಶ ಮಾಡಿದ ರಾಜ್ಯ ಸರ್ಕಾರ.....ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ - ಬಹುದಿನಗಳ ಬೇಡಿಕೆ ಈಡೇರಿಕೆ 'ಸಂಧ್ಯಾ ಕಿರಣ' ಯೋಜನೆ ಜಾರಿ.....ಇಬ್ಬರ ಶಿಕ್ಷಕರ ಅಮಾನತು ಆದೇಶ ರದ್ದು - ಅಮಾನತು ಮಾಡಿದ ಇಲಾಖೆಗೆ ಅಧಿಕಾರಿಗಳಿಗೆ ಮುಖ ಭಂಗ..... ಗೆದ್ದ ಶಿಕ್ಷಕರು.....ಮುಖ್ಯಶಿಕ್ಷಕ ಬಾಲಾಜಿ ಬಿರಾದಾರಗೆ ಬೀಳ್ಕೊಡುಗೆ - 33 ವರ್ಷ ಸೇವಾ ಬದುಕಿಗೆ ಸನ್ಮಾನ ಗೌರವ.....ರಾಜ್ಯದ ಸರ್ಕಾರಿ ಶಾಲೆಗಳಿಗೆ ಮತ್ತೊಂದು ಹೊಸ ಜವಾಬ್ದಾರಿ - ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಹೊಸ ತಲೆನೋವಿನ ಕೆಲಸದ ಆದೇಶ.....ಡಿಗ್ರಿ ಯಲ್ಲಿ ಎರಡು ಬಾರಿ ಫೇಲ್‌ ಕೆಪಿಎಸ್ ಸಿ ಪರೀಕ್ಷೆಯಲ್ಲಿ ಟಾಪರ್.....ಇದು KPSC ಪರೀಕ್ಷೆ ಪ್ರಪಂಚ.....