ಬೆಂಗಳೂರು -
ದುಡ್ಡು ಕೊಟ್ಟರೆ ಏನು ಆದರೂ ಆಗುತ್ತವೆ ಎಂಬುದಕ್ಕೆ ಕೆಪಿಎಸ್ ಸಿ ಪರೀಕ್ಷೆ ಯಲ್ಲಿನ ಗೋಲ್ ಮಾಲ್ ಸಾಕ್ಷಿ ಯಾಗಿದ್ದು ಸಧ್ಯ ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಡಿಗ್ರಿಯಲ್ಲಿ ಎರಡು ಬಾರಿ ಫೇಲ್ ಆಗಿ ಕೆಪಿಎಸ್ ಸಿ ಪರೀಕ್ಷೆಯಲ್ಲಿ ಟಾಪ್ 2 ಅಭ್ಯರ್ಥಿಯ 'ಎಕ್ಸಾಂ ಮಿರಾಕಲ್'ಗೆ CID ಶಾಕ್ ಆಗಿದ್ದಾರೆ
ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ (KPSC) ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ (CID) ತನಿಖೆ ಮುಂದುವರಿ ದಿರುವ ನಡುವೆಯೇ, ಅಭ್ಯರ್ಥಿಯೊಬ್ಬರ ಶೈಕ್ಷಣಿಕ ದಾಖಲೆಗಳು ಹಲವು ಅನುಮಾನಗಳಿಗೆ ಕಾರಣ ವಾಗಿವೆ.ಪಶುವೈದ್ಯಕೀಯ ಪದವಿ ವ್ಯಾಸಂಗದ ವೇಳೆ ಎರಡು ಬಾರಿ ಅನುತ್ತೀರ್ಣರಾಗಿದ್ದ ಅಭ್ಯರ್ಥಿ, ನೇಮಕಾತಿ ಪರೀಕ್ಷೆಯಲ್ಲಿ ಬರೋಬ್ಬರಿ 600 ಅಂಕ ಗಳಿಗೆ 478 ಅಂಕ ಪಡೆದು ಟಾಪ್-2 ರ್ಯಾಂಕ್ ಪಡೆದಿ ರುವುದು ತನಿಖಾಧಿಕಾರಿಗಳ ಗಮನ ಸೆಳೆದಿದೆ.
ತನಿಖೆಯ ಭಾಗವಾಗಿ ಪರಿಶೀಲಿಸಲಾಗಿರುವ ಅಭ್ಯರ್ಥಿ ಸುಗರೇಶ್ ಜಾಕ್ ಅವರ ಡಿಗ್ರಿ ಅಂಕ ಪಟ್ಟಿಯಲ್ಲಿ ಅವರು ಪದೇಪದೇ ಅನುತ್ತೀರ್ಣ ರಾಗಿರುವ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಆದರೆ ಇದೇ ಅಭ್ಯರ್ಥಿ ಪಶುವೈದ್ಯಾಧಿಕಾರಿ ನೇಮ ಕಾತಿ ಪರೀಕ್ಷೆಯಲ್ಲಿ 600ಕ್ಕೆ 478 ಅಂಕ ಗಳಿಸಿರು ವುದು ಇದೀಗ ಚರ್ಚೆಗೆ ಕಾರಣವಾಗಿದೆ.
ವಿಶೇಷವೆಂದರೆ, ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳೂ 350 ಅಂಕಗಳ ಗಡಿ ದಾಟಿಲ್ಲ ಎನ್ನಲಾಗುತ್ತಿದ್ದು, ಸುಗರೇಶ್ ಜಾಕ್ 478 ಅಂಕ ಗಳಿಸಿರುವುದು ತನಿಖಾಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಅತ್ಯಂತ ಸ್ಪರ್ಧಾತ್ಮಕವಾಗಿರುವ ನೇಮಕಾತಿ ಪರೀಕ್ಷೆಯಲ್ಲಿ ಇಷ್ಟು ಹೆಚ್ಚಿನ ಅಂಕ ಗಳಿಸಿರುವುದರ ಬಗ್ಗೆ ಸಿಐಡಿ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಸುಗರೇಶ್ ಜಾಕ್ ಅವರ ಹಿಂದಿನ ಶೈಕ್ಷಣಿಕ ಸಾಧನೆ ಮತ್ತು ನೇಮಕಾತಿ ಪರೀಕ್ಷೆ ಯ ಫಲಿತಾಂಶದ ನಡುವಿನ ಭಾರೀ ವ್ಯತ್ಯಾಸವೇ ಇದೀಗ ತನಿಖೆಯ ಪ್ರಮುಖ ಅಂಶವಾಗಿದೆ.
ಡಿಗ್ರಿ ವ್ಯಾಸಂಗದ ಸಂದರ್ಭದಲ್ಲಿ ಎರಡು ಬಾರಿ ಫೇಲ್ ಆಗಿದ್ದ ಅಭ್ಯರ್ಥಿ ನೇಮಕಾತಿ ಪರೀಕ್ಷೆಯಲ್ಲಿ ಹೇಗೆ ಅಷ್ಟು ಹೆಚ್ಚಿನ ಅಂಕ ಗಳಿಸಿದರು ಎಂಬ ಪ್ರಶ್ನೆ ತನಿಖಾಧಿಕಾರಿಗಳ ಮುಂದಿದೆ.ಇನ್ನು ಈ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ವಿಚಾರವೂ ಮುನ್ನೆಲೆಗೆ ಬಂದಿದೆ ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರೊಂದಿಗೆ ಸುಗರೇಶ್ ಜಾಕ್ ಸಂಬಂಧ ಹೊಂದಿದ್ದಾರೆ ಎನ್ನಲಾಗಿದ್ದು ಈ ಸಂಬಂಧವೂ ತನಿಖೆಯ ವ್ಯಾಪ್ತಿಗೆ ಬಂದಿರುವ ಸಾಧ್ಯತೆ ಇದೆ.
ಶಿವಶಂಕರಪ್ಪ ಸಾಹುಕಾರ್ ಅವರ ಪ್ರಭಾವ ಅಥವಾ ಕೃಪಾಕಟಾಕ್ಷದಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ ಎಂಬ ಅನು ಮಾನಗಳು ಕೇಳಿಬಂದಿವೆ.ಆದರೆ ಈ ಆರೋಪಗಳು ಇನ್ನೂ ತನಿಖೆಯ ಹಂತದಲ್ಲಿದ್ದು, ಸಿಐಡಿ ತನಿಖೆ ಯಿಂದಲೇ ವಾಸ್ತವಾಂಶ ಹೊರಬರಬೇಕಿದೆ. ಅಭ್ಯರ್ಥಿಯ ಅಸಾಮಾನ್ಯ ಪರೀಕ್ಷಾ ಫಲಿತಾಂಶಕ್ಕೆ ಕಾರಣವೇನು, ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ ಮತ್ತು ಸಂಬಂಧಿಕರ ಪ್ರಭಾವ ಬಳಕೆಯಾಗಿದೆಯೇ ಎಂಬ ಪ್ರಶ್ನೆಗಳಿಗೆ ತನಿಖೆಯ ಬಳಿಕ ಸ್ಪಷ್ಟ ಉತ್ತರ ಸಿಗುವ ನಿರೀಕ್ಷೆಯಿದೆ.
ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮದ ಆರೋಪ ಈಗಾಗಲೇ ಗಂಭೀರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳು, ಪರೀಕ್ಷಾ ಅಂಕಗಳು ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿನ ವಿವಿಧ ಹಂತಗಳನ್ನು ಸಿಐಡಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎನ್ನ ಲಾಗಿದೆ ಸುಗರೇಶ್ ಜಾಕ್ ಪ್ರಕರಣದಲ್ಲಿನ ಈ ಅಂಕಗಳ ವ್ಯತ್ಯಾಸವೂ ತನಿಖೆಗೆ ಮತ್ತಷ್ಟು ಕುತೂಹಲ ಮೂಡಿಸಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....