ಕಲಬುರಗಿ -
ಲಂಚ ಪಡೆಯುವಾಗ ಪೊಲೀಸ್ ಪೇದೆ ಗಳಿಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಲಬುರಗಿ ಯಲ್ಲಿ ನಡೆದಿದೆ ಹಣ ನೀಡದಿದ್ದರೆ ಗಡಿಪಾರು ಮಾಡುತ್ತೇ ನೆಂದು ಬೆದರಿಸಿ ಹಣ ಪಡೆಯುತ್ತಿದ್ದ ಪೊಲೀಸ್ ಪೇದೆಗಳಿಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ನಿಮ್ಮ ಮಗ ಕಳ್ಳತನ, ದರೋಡೆ ಮಾಡುತ್ತಿದ್ದಾನೆ ಜೊತೆಗೆ ಗಡಿಪಾರು ಮಾಡಲಾಗುವುದು ಎಂದು ಮನೆಗೆ ಹೋಗಿ ಬೆದರಿಸಿ ರಾತ್ರಿ ತನಕ ಠಾಣೆಯಲ್ಲಿಟ್ಟು ಕೊಂಡು ಒಂದು ಲಕ್ಷ ರೂ. ಹಣದ ಬೇಡಿಕೆ ಇಟ್ಟು ಅದರಲ್ಲಿ ಮೊದಲು 50 ಸಾವಿರ ರೂ ಪಡೆದಿದ್ದರು
ನಂತರ ಮತ್ತೆ 20 ಸಾವಿರ ರೂ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಕಲಬುರಗಿ ನಗರದ ಬ್ರಹ್ಮಪುರ ಠಾಣೆಯ ಪೇದೆ ಗಳಾದ ಪರಶುರಾಮ ಹಾಗೂ ವಿರೇಶ ಎಂಬಿಬ್ಬರು ಲಂಚ ಪಡೆಯುವಾಗ ಸಿಕ್ಕು ಬಿದ್ದ ಆರಕ್ಷಕರು. ಪೇದೆ ಗಳಿಬ್ಬರು ಬಾಪು ನಗರದಲ್ಲಿರುವ ಕನ್ನರಾಜು ಪಾಟೀಲ್ ಅವರ ಮನೆಗೆ ಹೋಗಿ ನಿಮ್ಮ ಮಗ ಕಾರ್ತಿಕ ಕಳ್ಳತನ, ದರೋಡೆ ಮಾಡುತ್ತಿದ್ದಾನೆ ಎಂದು ಬೆದರಿಸಿದ್ದಲ್ಲದೇ ಮಗನನ್ನು ಹಿಡಿದುಕೊಂಡು ಬಂದು ರಾತ್ರಿ ತನಕ ಗಡಿಪಾರು ಮಾಡುತ್ತೇವೆ ಎಂದು ಹೇಳಿ ರಾತ್ರಿ ಇಟ್ಟುಕೊಂಡು ಭಯಪಡಿಸುತ್ತಿದ್ದರು.
ಲೋಕಾಯುಕ್ತ ಎಸ್ಪಿ ಸಿದ್ದರಾಜು ಸಿ. ಪೊಲೀಸ್ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದ್ದು ತನಿಖೆ ಮಾಡ್ತಾ ಇದ್ದಾರೆ
ಸುದ್ದಿ ಸಂತೆ ನ್ಯೂಸ್ ಕಲಬುರಗಿ.....