LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 'OPS ಭಾಗ್ಯ'.....ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.....

ಬೆಂಗಳೂರು -

ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 'OPS ಭಾಗ್ಯ' ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ ಹೌದು ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ರಿಗೆ ಶಾಲಾ ಶಿಕ್ಷಣ ಇಲಾಖೆಯು ಬಹುದೊಡ್ಡ ಸಿಹಿಸುದ್ದಿ ನೀಡಿದೆ. 2005-06 ಹಾಗೂ 2006-07ನೇ ಸಾಲಿನಲ್ಲಿ, ಅಂದರೆ ದಿನಾಂಕ 01-04-2006ಕ್ಕಿಂತ ಮುಂಚಿತವಾಗಿ ಹೊರಡಿಸಲಾದ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಯಾಗಿ, ಆ ದಿನಾಂಕದಂದು ಅಥವಾ ನಂತರದಲ್ಲಿ ಸೇವೆಗೆ ಸೇರಿದ ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು ಹಳೆಯ ಡಿಫೈನ್ಡ್ ಪಿಂಚಣಿ (Defined Pension Scheme / OPS) ವ್ಯಾಪ್ತಿಗೆ ತಂದು ಇಲಾಖೆಯ ಆಯುಕ್ತರ ಕಚೇರಿ ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿದೆ .

ಬೆಂಗಳೂರು, ಮೈಸೂರು, ಧಾರವಾಡ ಮತ್ತು ಕಲಬುರಗಿ ವಿಭಾಗಗಳ ವ್ಯಾಪ್ತಿಯಿಂದ ಸಲ್ಲಿಕೆ ಯಾಗಿದ್ದ ಪ್ರಸ್ತಾವನೆಗಳಿಗೆ ಆರ್ಥಿಕ ಇಲಾಖೆಯು ಸಹಮತಿ ನೀಡಿದೆ. ಇದರ ಅನ್ವಯ 2006ರ ಏಪ್ರಿಲ್ 1ಕ್ಕೂ ಮುನ್ನ ಅಧಿಸೂಚನೆ ಹೊರಬಿದ್ದು, ನಂತರ ಕರ್ತವ್ಯಕ್ಕೆ ಹಾಜರಾದ ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಹಳೆಯ ಡಿಫೈನ್ಡ್ ಪಿಂಚಣಿ ಸೌಲಭ್ಯ ಅನ್ವಯವಾಗಲಿದೆ. ಇವರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳ (KCSR) ನಿಯಮ 2-C ಅನ್ವಯವಾಗುವುದಿಲ್ಲ ಬದಲಿಗೆ ಸಾಮಾನ್ಯ ಪಿಂಚಣಿಯ ಭಾಗ-IV ಅನ್ವಯ ವಾಗಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಎನ್‌ಪಿಎಸ್ ಕಡಿತ ಸ್ಥಗಿತ, ಜಿಪಿಎಫ್ ಖಾತೆ ಆರಂಭಕ್ಕೆ ಆದೇಶವನ್ನು ಹೊರಡಿಸಲಾಗಿದೆ

ಈ ಆದೇಶದ ಹಿನ್ನೆಲೆಯಲ್ಲಿ ಅರ್ಹ ಶಿಕ್ಷಕರಿಗೆ ಎಚ್‌ಆರ್‌ಎಂಎಸ್-2.0 (HRMS-2.0) ತಂತ್ರಾಂಶ ದಲ್ಲಿ ಪ್ರತಿ ತಿಂಗಳು ಕಡಿತವಾಗುತ್ತಿದ್ದ ಎನ್‌ಪಿಎಸ್ (NPS) ವಂತಿಕೆಯನ್ನು ತಕ್ಷಣವೇ ಸ್ಥಗಿತಗೊಳಿಸಲು ನಿರ್ದೇಶಿಸಲಾಗಿದೆ. ಜೊತೆಗೆ, ಅವರಿಗೆ ನೂತನ ಜಿಪಿಎಫ್ (GPF) ಖಾತೆಗಳನ್ನು ಸೃಜಿಸಲು ಹಾಗೂ ಈವರೆಗೆ ಅವರ ಪ್ರಾನ್ (PRAN) ಖಾತೆಯಲ್ಲಿ ಜಮೆಯಾಗಿರುವ ನೌಕರ ಮತ್ತು ಸರ್ಕಾರದ ವಂತಿಕೆಯ ಹಣವನ್ನು ನಿಯಮಾನುಸಾರ ಹಿಂಪಡೆದು ಇತ್ಯರ್ಥಪಡಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಡಿಡಿಪಿಐ (DDPI) ಹಾಗೂ ಬಿಇಒ (BEO) ಗಳಿಗೆ ಶಿಕ್ಷಣ ಇಲಾಖೆಯ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಕರ ವರ್ಗಾವಣೆ ಆರಂಭಿಸಿ ಶಿಕ್ಷಣ ಸಚಿವರಿಗೆ ಮನವಿ ನೀಡಿದ MLC.....ಶಿಕ್ಷಕರ ಸಮಸ್ಯೆ ಗಳ ಕುರಿತು ಧ್ವನಿ ಎತ್ತಿದ ವಿಧಾನ ಪರಿಷತ್ ಸದಸ್ಯರು.....ಸಾವಿರಾರು ಯುವಕರ ಬದುಕಿಗೆ ದಾರಿ ತೋರಿದ Big Mishra.....ಯುವಕರಿಗೆ ಕುಟುಂಬಗಳಿಗೆ ಆಸರೆಯಾದ ಸಂಜಯ ಮಿಶ್ರಾ.....ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನೂತನ ಸಾರಥಿಗಳು.....ಶುಭ ಹಾರೈಸಿದ ಶಾಸಕ N H ಕೋನರೆಡ್ಡಿ ಮತ್ತು ಟೀಮ್.....15 ಸಾವಿರ ಶಿಕ್ಷಕರ ಆಯ್ಕೆ ಪಟ್ಟಿ ರದ್ದು.....ಮೂರು ತಿಂಗಳಲ್ಲಿ ಹೊಸ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ.....ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 'OPS ಭಾಗ್ಯ'.....ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.....ಶಿಕ್ಷಕ ಆತ್ಮಹತ್ಯೆ ಪೊಲೀಸರ ಎದುರು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ.....ಸುಟ್ಟ ಸ್ಥಿತಿಯಲ್ಲಿ ಕಾನ್ಸ್ಟೇಬಲ್ ಶವ ಪತ್ತೆ.....ತನಿಖೆ ಕೈಗೊಂಡ ಪೊಲೀಸರು.....ಶಿಕ್ಷಣ ವಲಯದಲ್ಲಿ ಕಾವು ಹೆಚ್ಚಿಸಿದ 'ನೋಟಿಸ್'.....ಇಲಾಖೆಗೆ ತಂದಿಟ್ಟಿದೆ ದೊಡ್ಡ ಪ್ರಮಾಣದ ತಲೆನೋವು.....ದಸರಾ ವಿಭಾಗ ಮಟ್ಟಕ್ಕೆ ಆಯ್ಕೆಯಾದ ದೇವಸೂಗೂರು ಮಹಿಳಾ ಕಬಡ್ಡಿ ತಂಡ.....ದೇವಸೂಗೂರು ಗ್ರಾಮದ ಕ್ರೀಡಾ ಸ್ಪೂರ್ತಿ ಹೆಚ್ಚಿಸಿದ ಕ್ರೀಡಾ ಪ್ರತಿಭೆಗಳು.....ಶಿಕ್ಷಕರಿಗೆ ಮೂರು ದಿನಗಳ ಗಡುವು.....ದೊಡ್ಡ ಸಂಚಲನ ಸೃಷ್ಟಿಸಿದ ನೊಟೀಸ್‌ ವಿಚಾರ.....