LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕರಿಗೆ ಮೂರು ದಿನಗಳ ಗಡುವು.....ದೊಡ್ಡ ಸಂಚಲನ ಸೃಷ್ಟಿಸಿದ ನೊಟೀಸ್‌ ವಿಚಾರ.....

ಚಿಕ್ಕಬಳ್ಳಾಪುರ -

7ನೇ ತರಗತಿ ಮಕ್ಕಳಿಗೆ ವರ್ಣಮಾಲೆಯೇ ಬರಲ್ಲ ಎಂದುಕೊಂಡು ಬೋಧನೆ ಮಾಡಿದ ಚಿಕ್ಕಬಳ್ಳಾಪುರ ದ 180 ಶಿಕ್ಷಕರಿಗೆ ಈಗಾಗಲೇ ಶೋಕಾಸ್ ನೋಟಿಸ್ ನೀಡಲಾಗಿದ್ದು ಮೂರು ದಿನಗಳ ಕಾಲ ಗಡುವು ನೀಡಲಾಗಿದೆ ಹೌದು ಸರ್ಕಾರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳಿಗೆ ಕನಿಷ್ಠ ಅ, ಆ, ಇ, ಈ ವರ್ಣಮಾಲೆ ಯೇ ಬರುವುದಿಲ್ಲ ಎಂಬುದನ್ನು ಕಂಡು ಆಘಾತ ವ್ಯಕ್ತಪಡಿಸಿರುವ ಶಾಸಕ ಪ್ರದೀಪ್ ಈಶ್ವರ್, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಬೇಜವಾಬ್ದಾರಿ ತೋರಿದ ಚಿಕ್ಕಬಳ್ಳಾಪುರ ತಾಲೂಕಿನ ಬರೋಬ್ಬರಿ 180 ಶಿಕ್ಷಕ ರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕು ವ್ಯಾಪ್ತಿಯ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಶಾಸಕ ಪ್ರದೀಪ್ ಈಶ್ವರ್ ಅನಿರೀಕ್ಷಿತ ಭೇಟಿ ನೀಡಿ ಪರಿಶೀ ಲನೆ ನಡೆಸಿದ್ದಾಗ 7ನೇ ತರಗತಿಯಲ್ಲಿ ಓದುತ್ತಿರುವ ಅನೇಕ ಮಕ್ಕಳಿಗೆ ಕನಿಷ್ಠ ಅಕ್ಷರಾಭ್ಯಾಸವೇ ಇಲ್ಲದಿರು ವುದು ಕಂಡುಬಂದಿದೆ. ಇದರಿಂದ ಕರಗಿಹೋದ ಶಾಸಕರು 1 ರಿಂದ 7ನೇ ತರಗತಿಯವರೆಗೆ ಈ ಮಕ್ಕಳಿಗೆ ಬೋಧನೆ ಮಾಡಿದ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (BEO) ಖಡಕ್ ಸೂಚನೆ ನೀಡಿದ್ದರು.news_1789876634_0_418.webp

 

ಶಾಸಕರ ಪತ್ರದ ಹಿನ್ನೆಲೆಯಲ್ಲಿ ಶಿಕ್ಷಣ ಸಂಯೋಜ ಕರು, ಬಿಆರ್‌ಪಿ ಹಾಗೂ ಸಿಆರ್‌ಪಿ ಸಿಬ್ಬಂದಿಗಳನ್ನು ನಿಯೋಜಿಸಿ ತಾಲೂಕಿನ ಶಾಲೆಗಳಲ್ಲಿ 7ನೇ ತರಗತಿ ಮಕ್ಕಳಿಗೆ ವಿಶೇಷ ಪರೀಕ್ಷೆ ನಡೆಸಿ ಕಲಿಕೆಯಲ್ಲಿ ಅತ್ಯಂತ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಹಾಗೂ ಅವರಿಗೆ ಬೋಧನೆ ಮಾಡಿದ ಶಿಕ್ಷಕರ ಪಟ್ಟಿಯನ್ನು ಸಿದ್ಧಪಡಿಸ ಲಾಯಿತು. ಈ ಆಧಾರದ ಮೇಲೆ ಕಳಪೆ ಬೋಧನೆ ಮಾಡಿದ 180 ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ನೋಟಿಸ್ ಜಾರಿ ಮಾಡಲಾಗಿದೆ.

ಕರ್ನಾಟಕ ಕಡ್ಡಾಯ ಶಿಕ್ಷಣ ಕಾಯ್ದೆ ಉಲ್ಲಂಘನೆ ಹಾಗೂ ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ, "ಕರ್ನಾಟಕ ನಾಗರಿಕ ಸೇವಾ ನಿಯಮಗಳಡಿ ನಿಮ್ಮ ವಿರುದ್ಧ ಏಕೆ ಶಿಸ್ತುಕ್ರಮ ಜರುಗಿಸಬಾರದು ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ. ನೋಟಿಸ್ ತಲುಪಿದ 3 ದಿನಗಳ ಒಳಗಾಗಿ ಸೂಕ್ತ ದಾಖಲೆಗಳೊಂದಿಗೆ ಲಿಖಿತ ಸಮಜಾಯಿಷಿ ನೀಡಬೇಕು ತಪ್ಪಿದ್ದಲ್ಲಿ ಏಕಪಕ್ಷೀಯವಾಗಿ ಶಿಸ್ತುಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ನೋಟಿಸ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಚಿಕ್ಕಬಳ್ಳಾಪುರ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸುಟ್ಟ ಸ್ಥಿತಿಯಲ್ಲಿ ಕಾನ್ಸ್ಟೇಬಲ್ ಶವ ಪತ್ತೆ.....ತನಿಖೆ ಕೈಗೊಂಡ ಪೊಲೀಸರು.....ಶಿಕ್ಷಣ ವಲಯದಲ್ಲಿ ಕಾವು ಹೆಚ್ಚಿಸಿದ 'ನೋಟಿಸ್'.....ಇಲಾಖೆಗೆ ತಂದಿಟ್ಟಿದೆ ದೊಡ್ಡ ಪ್ರಮಾಣದ ತಲೆನೋವು.....ದಸರಾ ವಿಭಾಗ ಮಟ್ಟಕ್ಕೆ ಆಯ್ಕೆಯಾದ ದೇವಸೂಗೂರು ಮಹಿಳಾ ಕಬಡ್ಡಿ ತಂಡ.....ದೇವಸೂಗೂರು ಗ್ರಾಮದ ಕ್ರೀಡಾ ಸ್ಪೂರ್ತಿ ಹೆಚ್ಚಿಸಿದ ಕ್ರೀಡಾ ಪ್ರತಿಭೆಗಳು.....ಶಿಕ್ಷಕರಿಗೆ ಮೂರು ದಿನಗಳ ಗಡುವು.....ದೊಡ್ಡ ಸಂಚಲನ ಸೃಷ್ಟಿಸಿದ ನೊಟೀಸ್‌ ವಿಚಾರ.....16 ಜಿಲ್ಲೆಗಳ DDPI, BEO ವಿರುದ್ಧ ಆರಂಭಗೊಂಡ ತನಿಖೆ.....ಅಧಿಕಾರಿಗಳಲ್ಲಿ ಶುರುವಾಯಿತು ಢವಢವ.....ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ.....ಬೆಳ್ಳಂ ಬೆಳಿಗ್ಗೆ ಸರ್ಕಾರಿ ಅಧಿಕಾರಿ ಮೇಲೆ CM ಗರಂ ಅಮಾನತು ಮಾಡಲು ಸೂಚನೆ.....ಸರ್ಕಾರಿ ಅಧಿಕಾರಿ ವಿರುದ್ಧ CM ಆಕ್ರೋಶ..... ಶೈಕ್ಷಣಿಕ ಪ್ರವಾಸದಲ್ಲಿ ನೋ ಸೆಲ್ಫಿ,ನೋ ರೀಲ್ಸ್‌ ಸಂಪೂರ್ಣವಾಗಿ ಬ್ಯಾನ್.....ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ..... 71 ಶಾಲೆಗಳ 182 ಜನ ಶಿಕ್ಷಕರಿಗೆ ನೊಟೀಸ್ .....ಶಾಸಕರ ನಡೆಗೆ ಅಸಮಾಧಾನ ಬೇಸರ.....ರಾಜ್ಯದ ಸಮಸ್ತ ಶಿಕ್ಷಕ ಬಂಧುಗಳಿಗೆ KSPSTA ಮಹತ್ವದ ಸಂದೇಶ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಅವರಿಂದ ಮಹತ್ವದ Message.....ಈಗಲೇ ಈ ಕೆಲಸ ಮಾಡಿ.....