ಹುಬ್ಬಳ್ಳಿ –

ಅವೈಜ್ಞಾನಿಕ ಫಲಿತಾಂಶವನ್ನು ಖಂಡಿಸಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು, ವಿದ್ಯಾರ್ಥಿ ಹೋರಾಟ ಸಮಿತಿ ಧಾರವಾಡ ಹಾಗೂ ಎಸ್ಎಫ್ಐ ವತಿಯಿಂದ ಕುಲಪತಿಗಳಿಗೆ ಮನವಿ ಸಲ್ಲಿಸಿದರು.

ಇಲ್ಲಿನ ನವನಗರದಲ್ಲಿರುವ ಕಾನೂನು ವಿಶ್ವ ವಿದ್ಯಾಲಯದ ಕೋವಿಡ್ ನಿಯಮದ ಹಿನ್ನಲೆಯಲ್ಲಿ ಮುಂದಿನ ವರ್ಷಕ್ಕೆ ತೇರ್ಗಡೆಗೊಳಿಸುವ ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಫಲಿತಾಂಶ ಹೊರಡಿಸಿರುವುದು ಖಂಡನೀಯವಾಗಿದೆ

ಕೂಡಲೇ ಈ ಅವೈಜ್ಞಾನಿಕ ಫಲಿತಾಂಶವನ್ನು ಹಿಂಪಡೆದು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸ ಬೇಕೆಂದು ವಿನಂತಿಸಿಕೊಂಡರು