ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ CM ಗೆ ಧನ್ಯವಾದಗಳು ಸಮಸ್ತ ಕಲಘಟಗಿ ತಾಲೂಕಿನ ನೌಕರರ ಪರವಾಗಿ…..

Suddi Sante Desk

ಧಾರವಾಡ –

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮನವಿ ಮೇರೆಗೆ ರಾಜ್ಯ ಸರಕಾರಿ ನೌಕರರಿಗೆ ಹಬ್ಬದ ಮುಂಗಡ ಹಣವನ್ನು ಈಗಿರುವ 10000=00 ರೂಗಳಿಂದ 25,000 =00 ರೂಪಾಯಿಗಳಿಗೆ ಹೆಚ್ಚಿಸಿದ ರಾಜ್ಯದ ಮುಖ್ಯಮಂತ್ರಿ ಗಳಾದ ಬಸವರಾಜ್ ಬೊಮ್ಮಾಯಿ ರವರಿಗೆ ಮತ್ತು ಈ ಆದೇಶ ಮಾಡಿಸಲು ಅವಿರತವಾಗಿ ಶ್ರಮಿಸಿದ ರಾಜ್ಯಾಧ್ಯಕ್ಷ ರಾದ ಸಿ ಎಸ್ ಷಡಾಕ್ಷರಿಯವರಿಗೆ ಕಲಘಟಗಿ ತಾಲೂಕಿನ ಸಮಸ್ತ ರಾಜ್ಯ ಸರಕಾರಿ ನೌಕರರ ಪರವಾಗಿ ಕಲಘಟಗಿ ತಾಲೂಕು ಅಧ್ಯಕ್ಷರಾದ ಆರ್ ಎಂ ಹೊಲ್ತಿಕೋಟಿ ಯವರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಸದರಿ ಆದೇಶದಿಂದ ವಿಶೇಷವಾಗಿ ಸಿ ಮತ್ತು ಡಿ ದರ್ಜೆ ನೌಕರರಿಗೆ ಹೆಚ್ಚು ಅನುಕೂಲವಾಗುತ್ತದೆ ಅಲ್ಲದೆ ಈ ಹಿಂದೆ ವೇತನ ಪರಿಷ್ಕರಣೆ ಸಂದರ್ಭದಲ್ಲಿ ಮಾತ್ರ ಹಬ್ಬದ ಮುಂಗಡ ಹಣವನ್ನು ಹೆಚ್ಚಿಸಿರುವ ಉದಾಹರಣೆ ಇದ್ದು ಕೇವಲ ಮೂರೇ ವರ್ಷಗಳಲ್ಲಿ ಒಂದೂವರೆ ಪಟ್ಟು ಹಬ್ಬದ ಮುಂಗಡ ಹೆಚ್ಚಿಸಿ ಆದೇಶ ಮಾಡಿಸಿದ ಪ್ರಯುಕ್ತ ಕಲಘಟಗಿ ತಾಲೂಕಿನ ನೌಕರ ಸಂಘದ ಅಧ್ಯಕ್ಷ ಆರ್ ಎಂ ಹೊಲ್ತಿಕೋಟಿ ಕಾರ್ಯದರ್ಶಿಗಳಾದ ಆರ್ ಎಸ್ ಜಂಬಗಿ ರಾಜ್ಯ ಪರಿಷತ್ ಸದಸ್ಯರಾದ ನವೀನ ಗೂಳೆರ ಖಜಾಂಚಿ ರಾಜು ವಿ ಲಮಾಣಿ ಹಾಗೂ ಎಲ್ಲ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹರ್ಷ ವ್ಯಕ್ತಪಡಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.