ಬಾಗಲಕೋಟೆ –
ಒಂದು ಕುರ್ಚಿ ಇಬ್ಬರು ಅಧಿಕಾರಿಗಳ ಪೈಟ್ – ಒಂದೇ ಚೇಂಬರ್ ನಲ್ಲಿ ಇಬ್ಬರು ಅಧಿಕಾರಿಗಳು ಕುಳಿತುಕೊಂಡು ಅಧಿಕಾರ ಇಕ್ಕಟ್ಟಿನಲ್ಲಿ ಇಲಾಖೆಯ ಸಿಬ್ಬಂದಿಗಳು ಮೌನವಾಗಿದ್ದಾರೆ ಜನಪ್ರತಿನಿಧಿಗಳು
ಒಂದೇ ಹುದ್ದೆ ಒಂದೇ ಕುರ್ಚಿ ಗಾಗಿ ಇಬ್ಬರು ಅಧಿಕಾರಿಗಳು ಪೈಟ್ ಮಾಡುತ್ತಾ ಒಂದೇ ಚೇಂಬರ್ ನಲ್ಲಿ ಇಬ್ಬರು ಅಧಿಕಾರಿಗಳು ಕುಳಿತು ಕೊಂಡು ಅಧಿಕಾರವನ್ನು ಚಲಾಯಿಸುತ್ತಿರುವ ಚಿತ್ರಣವೊಂದು ಬಾಗಲಕೋಟೆಯಲ್ಲಿ ಕಂಡು ಬಂದಿದೆ.ಹೌದು ನಗರಸಭೆ ಆಯುಕ್ತರ ಕುರ್ಚಿ ಗಾಗಿ ಈ ಒಂದು ಗೊಂದಲವು ಇಬ್ಬರು ಅಧಿಕಾರಿ ಗಳಲ್ಲಿ ಕಂಡು ಬಂದಿದೆ.
ಹೀಗಾಗಿ ಒಂದೇ ಚೇಂಬರ್ನಲ್ಲಿ ಇಬ್ಬರು ಅಧಿಕಾ ರಿಗಳು ಕುಳಿತುಕೊಂಡಿದ್ದಾರೆ.ಬಾಗಲಕೋಟೆ ನಗರಸಭೆ ಆಯುಕ್ತರ ಕುರ್ಚಿಗಾಗಿ ಇದೀಗ ಇಬ್ಬರು ಅಧಿಕಾರಿಗಳ ನಡುವೆ ಸ್ಪರ್ಧೆ ಏರ್ಪಟ್ಟಿ ದ್ದು ಆಯುಕ್ತರ ಕುರ್ಚಿಗಾಗಿ ಬಾಗಲಕೋಟೆ ನಗರದಲ್ಲಿ ಗೊಂದಲ ಮುಂದುವರೆದಿದೆ ಇತ್ತೀಚೆ ಗಷ್ಟೇ ಆರೋಗ್ಯ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ಗೊಂದಲ ಮಾಡಿಕೊಂಡಿದ್ದರು.ಅದು ಮಾಸುವ ಮುಂಚೆ ಈಗ ನಗರಸಭೆ ಆಯುಕ್ತರ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ಮಧ್ಯೆ ಪೈಪೋಟಿ ನಡೆದಿ ರುವುದು ಚರ್ಚೆಗೆ ಗ್ರಾಸವಾಗಿದೆ.
ಹಿಂದಿನ ಆಯುಕ್ತ ಹಾಗೂ ಹಾಲಿ ಆಯುಕ್ತರ ಮಧ್ಯೆ ಕುರ್ಚಿಗಾಗಿ ಸ್ಪರ್ಧೆ ಏರ್ಪಟ್ಟಿದ್ದು ಒಂದೇ ಚೇಂಬರ್ನಲ್ಲಿ ಕುಳಿತ ಇಬ್ಬರೂ ಆಯುಕ್ತರು ಆಡಳಿತ ನಡೆಸಲು ಮುಂದಾಗಿದ್ದಾರೆ.ಹಿಂದಿನ ನಗರಸಭೆ ಆಯುಕ್ತ ಆರ್ ವಾಸನ್ ಇತ್ತೀಚೆಗೆ ವರ್ಗಾವಣೆಗೊಂಡಿದ್ದರು ಹೊಸದಾಗಿ ರಮೇಶ್ ಜಾಧವ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿ ದ್ದರು ಹೀಗಾಗಿ ರಮೇಶ್ ಜಾಧವ್ ಮತ್ತು ಆರ್ ವಾಸನ್ ನಡುವೆ ಕುರ್ಚಿಗಾಗಿ ಬಿಗ್ ಪೈಟ್ ನಡೆ ಯುತ್ತಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ ವರ್ಗಾವಣೆಯಾಗಿದ್ದ ಆರ್ ವಾಸನ್ ವರ್ಗಾವಣೆ ಪ್ರಶ್ನಿಸಿ ಕೆಎಟಿ ಮೆಟ್ಟಿಲೇರಿದ್ದರು.ಸರ್ಕಾರಿ ಆದೇಶ ದಿಂದ ಬಾಗಲಕೋಟೆ ನಗರಸಭಾ ಆಯುಕ್ತರ ಹುದ್ದೆಗೆ ರಮೇಶ್ ಜಾಧವ್ ಅವರನ್ನು ನಿಯುಕ್ತಿ ಗೊಳಿಸಲಾಗಿತ್ತು.ಆಗಸ್ಟ್ 12 ರಂದು ಆರ್ ವಾಸನ್ ಅವರ ವರ್ಗಾವಣೆಯಾಗಿತ್ತು. ಸರ್ಕಾ ರದ ಆದೇಶ ತಂದು ಹುದ್ದೆ ಅಲಂಕರಿಸಿದ್ದೇನೆ ಎಂದು ಆಯುಕ್ತ ರಮೇಶ್ ಜಾಧವ್ ತಿಳಿಸಿದ್ದಾರೆ.
ಮತ್ತೊಂದೆಡೆ ಕೆಎಟಿಯಿಂದ ಆದೇಶ ತಗೊಂಡು ಬಂದಿರುವೆ ಎಂದು ಹಿಂದಿನ ನಗರಸಭಾಆಯುಕ್ತ ಆರ್ ವಾಸನ್ ತಿಳಿಸಿದ್ದಾರೆ.ಇಬ್ಬರ ಅಧಿಕಾರಿಗ ಳಿಂದ ಯಾರ ಆದೇಶ ಪಾಲಿಸಬೇಕು ಎಂದು ಇತರ ಸಿಬ್ಬಂದಿ ಗೊಂದಲಕ್ಕೆ ಒಳಗಾಗಿದ್ದಾರೆ. ನಂತರ ಕೆಎಟಿ ಕಾನೂನು ಆದೇಶ ಪಾಲಿಸುವು ದಾಗಿ ಜಾಧವ್ ಮಾಹಿತಿ ನೀಡಿ ಆಯುಕ್ತ ಕಚೇರಿ ಯಿಂದ ಹೊರಗೆ ಹೋಗಿದ್ದು ಇದೇಲ್ಲವನ್ನು ನೋಡಿಕೊಂಡು ಸ್ಥಳೀಯ ಜನಪ್ರತಿನಿಧಿಗಳು ಮೌನವಾಗಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬಾಗಲಕೋಟೆ…..