ಶಿಕ್ಷಕರಿಗೆ ಬಡ್ತಿ ವಿಚಾರಕ್ಕೆ DDPI ಅವರಿಗೆ ಮನವಿ ಶಿಕ್ಷಕರ ಹಲವು ವಿಚಾರಗಳ ಕುರಿತು ಬೇಡಿಕೆ…..

Suddi Sante Desk

ಬೆಳಗಾವಿ –

ಪ್ರಧಾನ ಗುರುಗಳ ಬಡ್ತಿ ವಿಷಯವಾಗಿ ಬೆಳಗಾವಿ ಯ ಉಪ ನಿರ್ದೇಶಕ ರಾದ ಬಿ.ಎಂ.ನಾಲತವಾಡರವರನ್ನು ಈ ದಿನ ಭೇಟಿಮಾಡಿ ಶಿಕ್ಷಕರ ಕೆಲವೊಂದಿಷ್ಟು ವಿಷಯಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

  1. ಪಟ್ಟಿಗಳಲ್ಲಿರುವ ನ್ಯೂನತೆಗಳಿಗೆ ಸಂಬಂಧಿಸಿದಂತೆ ಬಂದಿರುವ ಆಕ್ಷೇಪಣೆಗಳಿಗೆ ತಪ್ಪದೇ ಕ್ರಮಕೈಗೊಂಡು ದೋಷರಹಿತ ಪಟ್ಟಿಯನ್ನು ತಯಾರಿಸಲು ಎಲ್ಲಾ ತಾಲೂಕಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲು ತಿಳಿಸಲಾಯಿತು.
  2. ABC ಸ್ಥಳಾಂತರ ಕೌಂಸಲಿಂಗ ಮಾಡಿ ಇಲ್ಲಾ ABC ಮೂರೂ ವಲಯಗಳನ್ನು OPEN ಇಟ್ಟು ಕೌಂಸಲಿಂಗ ಮಾಡುವಂತೆ ಚರ್ಚಿಸಲಾಯಿತು.
  3. ನಾಳೆ ದಿ.27 ರಂದು ತಪ್ಪದೇ ಅಂತಿಮ ಪಟ್ಟಿ ಹಾಗೂ ಖಾಲಿಹುದ್ದೆಗಳ ಪಟ್ಟಿಗಳನ್ನು ಪ್ರಕಟಪಡಿಸಲು ಕೋರಲಾಯಿತು.
  4. ಮೊದಲೇ ಸೂಚಿಸಿದಂತೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವಿಭಜನೆ ಮಾಡುವ ಮುಂಚಿತವಾಗಿ ಸೇವೆಗೆ ಸೇರಿದ ಶಿಕ್ಷಕರನ್ನು ಸೇವಾ ಜೇಸ್ಥತೆಗೆ ಪರಿಗಣಿಸಲು ಈಗಾಗಲೇ ಕ್ರಮಕೈಗೊಂಡಿದ್ದು ಅದರಂತೆ ಪಟ್ಟಿಯಲ್ಲಿ ಸೇರ್ಪಡೆ ಆಗಿರುವುದನ್ನು ಖಚಿತಪಡಿಸುವಂತೆ ಕೋರಲಾಗಿದೆ.
  5. ಶಿಕ್ಷಕರ ಆಕ್ಷೇಪಣೆಗಳಿಗೆ ಸ್ಪಷ್ಟೀಕರಣದೊಂದಿಗೆ ಅರ್ಜಿ ವಿಲೇವಾರಿ ಮಾಡುವಂತೆ ಕೊರಲಾಯಿತು.

6)ಈಗಾಗಲೇ ಪ್ರಕಟಿಸಿರುವ ಪಟ್ಟಿ ಜಿಲ್ಲೆಯ ಸಮಗ್ರ ಪಟ್ಟಿ ಇರುತ್ತದೆ.. ಅಂತಿಮ ಪಟ್ಟಿ ಪ್ರಕಟವಾದ ಸಂದರ್ಭದಲ್ಲಿ ಮೃತ..ವರ್ಗಾವಣೆ..ಸ್ವಯಂ ನಿವೃತ್ತಿ ಮತ್ತು ನಿವೃತ್ತಿ ಶಿಕ್ಷಕರ ಹೆಸರೂ ಕೂಡ ಇದ್ದು…ಕೌನ್ಸಲಿಂಗ್ ಸಂದರ್ಭದಲ್ಲಿ ಈ ಶಿಕ್ಷಕರ ಹೆಸರು ಕೈಬಿಟ್ಟು ಪರಿಷ್ಕೃತ ಪಟ್ಟಿ ಯೊಂದಿಗೆ ಕೌನ್ಸಲಿಂಗ್ ಜರುಗುವದು…ಇದರ ಬಗ್ಗೆ ಯಾರೂ ಗೊಂದಲ ಮಾಡಿಕೊಳ್ಳಬೇಡಿ ಎಂದು ಜಿಲ್ಲಾ ಸಂಘ ಕೋರುತ್ತದೆ…

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನೆಯಿಂದ ಜಯಕುಮಾರ ಹೆಬಳಿ.ವಾಯ್.ಬಿ.ಪೂಜಾರ. ಕೆ.ಎಸ್.ರಾಚಣ್ಣವರ.ಗ್ರಾಮೀಣ ಅಧ್ಯಕ್ಷರಾದ ಪ್ರಕಾಶ ದೇಯಣ್ಣವರ..ನಗರ ಅಧ್ಯಕ್ಷರಾದ ಬಾಬು ಸೊಗಲಣ್ಣವರ..ನೌಕರ ಸಂಘದ ಜಿಲ್ಲಾ ನೌಕರ ಸಂಘದ ನಿರ್ದೇಶಕರಾದ ಆರ್.ವಿ.ಹೈಬತ್ತಿ ಹಾಜರಿದ್ದರು…

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.