ಹುಬ್ಬಳ್ಳಿಯಲ್ಲಿ AIMIM ಪಾಲಿಕೆ ಯ ಸದಸ್ಯನನ್ನು ಬಂಧನ ಮಾಡಿದ ಪೊಲೀಸರು – ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿಸಿದ ಪೊಲೀಸರು…..

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿಯ ಗಲಭೆ ಪ್ರಕರಣದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ನಜೀರ್ ಅಹ್ಮದ್ ಹೊನ್ಯಾಳ ಅವರನ್ನು ಬಂಧನ ಮಾಡಲಾಗಿದೆ.ಹೌದು ಈ ಒಂದು ಗಲಭೆಯಲ್ಲಿ ಇವರ ಹೆಸರು ಕೇಳಿ ಬಂದಿತು ಇನ್ನೂ ವಿಚಾರಣೆ ಸಮಯದಲ್ಲಿ ಮಾಸ್ಟರ್ ಮೈಂಡ್ ವಾಸಿಂ ಪಠಾಣ್ ಹೆಸರನ್ನು ಪೊಲೀಸರ ಮುಂದೆ ಹೇಳಿದ್ದು ಹೀಗಾಗಿ ಈ ಒಂದು ಆಧಾರದ ಮೇಲೆ ಗೋವಾದಲ್ಲಿ ಅಡಗಿ ಕುಳಿತಿದ್ದ ನಜೀರ್ ಅಹ್ಮದ್ ಅವರನ್ನು ಇಂದು ಪೊಲೀಸರು ವಶಕ್ಕೆ ತಗೆದುಕೊಂಡಿದ್ದರು.ಸುಧೀರ್ಘವಾಗಿ ವಿಚಾರಣೆ ಮಾಡಿದ ನಂತರ ಪೊಲೀಸರು ಇವರನ್ನು ಅಧಿಕೃತವಾಗಿ ಬಂಧನವನ್ನು ಮಾಡಿದ್ದಾರೆ.

ಹೌದು ಕೊನೆಗೂ ಎಐಎಂಐಎಂ ಕಾರ್ಪೊರೇಟರ್ ನಜೀರ್ ಅಹ್ಮದ ಹೊನ್ಯಾಳ ಅವರನ್ನು ಬಂಧನ ಮಾಡಿದ್ದು ಬಂಧಿಸಿ ಆರೋಗ್ಯ ತಪಾಸಣೆಗೆ ಪೊಲೀಸರು ಕರದು ಕೊಂಡು ಹೋಗಿದ್ದಾರೆ.ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪರೀಕ್ಷೆಯನ್ನು ಮಾಡಿಸಿ ನಂತರ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ನ್ಯಾಯಾಧೀಶರ ಮುಂದೆ ಹಾಜರು ಮಾಡಲಿ ದ್ದಾರೆ.ಮಧ್ಯಾಹ್ನ ಇವರನ್ನು ವಶಕ್ಕೆ ತಗೆದುಕೊಂಡಿದ್ದರು ಪೊಲೀಸರು ವಿಚಾರಣೆಯಲ್ಲಿ ನಜೀರ್ ಪಾತ್ರ ಕಂಡು ಬಂದ ಹಿನ್ನಲೆಯಲ್ಲಿ ಆತನನ್ನ ಬಂಧಿಸಿದ್ದಾರೆ ಪೊಲೀಸರು.

ಇನ್ನೂ ಆರೋಗ್ಯ ತಪಾಸಣೆ ಹೊಗುವಾಗ ತಮ್ಮ ಆಪ್ತರ ಬಳಿ ವಾಚ್ ಹಾಗೂ ಪರ್ಸ್ ನ್ನು ಕೊಟ್ಟು ಹೋದರು ನಜೀರ್ ಅಹ್ಮದ್ ಹೊನ್ಯಾಳ್ ಅವರು.ನಜೀರ್ ಅಹ್ಮದ್ ಹೊನ್ಯಾಳ್, ಮೊಹ್ಮದ್ ಆರೀಫ್ ಹಾಗೂ ಬಾಷಾ ಪುಲಾರೆ ಯನ್ನ ಆರೋಗ್ಯ ತಪಾಸಣೆಗೆ ಕರೆದುಕೊಂಡು ಹೋದರು ಪೊಲೀಸರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.