This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Local News

ಧಾರವಾಡಗೆ ಮಾಜಿ ಸಚಿವ ವಿನಯ ಕುಲಕರ್ಣಿ – ಬೆಳಗಾವಿ ಜೈಲಿನಿಂದ ಭದ್ರತೆ ಯ ನಡುವೆ ಕರೆತಂದ ಪೊಲೀಸರು ಧಾರವಾಡ ದಲ್ಲಿ ಭದ್ರತೆ…..

WhatsApp Group Join Now
Telegram Group Join Now

ಧಾರವಾಡ –

ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಧಾರವಾಡಗೆ ಕರೆದುಕೊಂಡು ಬರಲಾ ಗಿದೆ ಈಗಾಗಲೇ ಈ ಒಂದು ಪ್ರಕರಣದಲ್ಲಿ ಬಂಧನ ವಾಗಿ ಬೆಳಗಾವಿಯ ಜೈಲಿನಲ್ಲಿರುವ ಇಂದು ಇವರ ನ್ನು ಧಾರವಾಡಕ್ಕೆ ಕರೆದುಕೊಂಡು ಬರಲಾಗಿದೆ

ಬೆಳಗಾವಿಯ ಹಿಂಡಲಗಾ ಜೈಲಿನಿಂದ ಭದ್ರತೆಯ ನಡುವೆ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಯೋಗೀಶಗೌಡ ಹತ್ಯೆಯ ಸಿಬಿಐ ತನಿಖೆಯಲ್ಲಿ ಜೈಲು ಸೇರಿರೋ ವಿನಯ ಕಳೆದ 9 ತಿಂಗಳಿನಿಂದ ಜೈಲಿನಲ್ಲಿದ್ದಾರೆ ವಿನಯ ಕುಲಕರ್ಣಿ.ಪತ್ನಿ ಶಿವಲೀ ಲಾ ಅವರಿಗೆ ಜಿಪಿಎ ನೀಡಲು ಆಗಮಿಸಿದ್ದಾರೆ.

ಜಿಪಿಎ ಸಾಮಾನ್ಯ ಅಧಿಕಾರ ಪತ್ರವಾಗಿದ್ದು ಜನಪ್ರತಿ ನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಿ ದ್ದ‌ರು ವಿನಯ ಕುರಕರ್ಣಿ ಕೋರಿಕೆಗೆ ಅನುಮತಿ ಯನ್ನು ನ್ಯಾಯಾಲಯ ನೀಡಿದೆ.ಧಾರವಾಡದ ಉಪ ನೋಂದಣಾಧಿಕಾರಿ ಕಚೇರಿಗೆ ಇಂದು ಆಗಮಿಸಿದ್ದಾರೆ.ನಗರದ ಮಿನಿ ವಿಧಾನ ಸೌಧ ಕಟ್ಟಡದಲ್ಲಿದೆ ಈ ಒಂದು ಕಚೇರಿ ಉಪನೋಂದಣಾ ಧಿಕಾರಿ‌ ಕಚೇರಿಗೆ ವಿನಯ ಆಗಮನ ಹಿನ್ನೆಲೆಯಲ್ಲಿ ಕಚೇರಿಗೆ ಪೊಲೀಸ್ ಬಿಗಿ ಬಂದೋಬಸ್ತ್ ನ್ನು ಮಾಡಲಾಗಿದೆ.

ಮಿನಿ ವಿಧಾನಸೌ ಧದಲ್ಲಿರೋ ಕಚೇರಿ ಕಚೇರಿ ಬಳಿ ವಿನಯ ಬೆಂಬ ಲಿಗರು ಸೇರೋ ಸಾಧ್ಯತೆ ಹಿನ್ನಲೆ ಯಲ್ಲಿ ಭದ್ರತೆ ಯನ್ನು ಒದಗಿಸಲಾಗಿದೆ ಸಾಧ್ಯತೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇನ್ನೂ ಡಿಸಿಪಿ ರಾಮರಾಜನ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದ್ದು ವಿನಯ ಕುಲಕರ್ಣಿ ಆಗಮಿಸಿ ಕಚೇರಿಯಲ್ಲಿ ಪತ್ನಿಗೆ ಜಿಪಿಎ ಅನ್ನು ನೀಡಿದರು.

ನಂತರ ಬ್ಯಾಂಕ್ ಗೆ ಕರೆದುಕೊಂಡು ಹೋಗಿ ಅಲ್ಲೂ ಕೂಡಾ ಬ್ಯಾಂಕ್ ನ ಖಾತೆಗಳನ್ನು ಬದಲಾವಣೆ ಮಾಡಿ ಪತ್ನಿಗೆ ಸಂಪೂರ್ಣವಾದ ಅಧಿಕಾರವನ್ನು ನೀಡಲಿದ್ದು ಇಲ್ಲೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು ನಂತರ ನೇರವಾಗಿ ಬೆಳಗಾವಿಯ ಜೈಲಿಗೆ ಪೊಲೀಸರು ಕರೆದುಕೊಂಡು ಹೋಗಲಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk