ಹುಬ್ಬಳ್ಳಿಯಲ್ಲಿ ಕಾರ್ಮಿಕನ ಮೇಲೆ ಪಿಎಸ್ಐ ದರ್ಪ – ಹಣ ಬಿಡಿಸಿಕೊಳ್ಳುಲು ಹೋಗುತ್ತಿದ್ದವನ ಮೇಲೆ ಪೊಲೀಸರ ದರ್ಪ…..

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿಯಲ್ಲಿ ಪೊಲೀಸರ ದರ್ಪ ಕಂಡು ಬಂದಿದೆ. ಕಾರ್ಮಿಕನ ಮೇಲೆ ಪಿಎಸ್ ಐ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.ನಗರದ ಹಳೇ ಹುಬ್ಬಳ್ಳಿಯ ಠಾಣೆಯ ಸಬ್ ಇನ್ಸಪೆಕ್ಟರ್ ಸುಖಾನಂದ ಶಿಂಧೆಯಿಂದ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

ವಾಹನ ತಪಾಸಣೆ ವೇಳೆ ಕಾರ್ಮಿಕನಿಗೆ ಲಾಠಿಯಿಂ ದ ತೆಲೆಗೆ ಹೊಡೆದಿದ್ದಾರಂತೆ ಪಿಎಸ್ ಐ ಅವರು. ರೆಹಮತವುಲ್ಲಾ ಕಾಗದಗಾರ ಹಲ್ಲೆಗೆ ಒಳಗಾದ ಕಾರ್ಮಿಕನಾಗಿದ್ದಾನೆ.ಎಟಿಎಂಗೆ ಹಣ ಬಿಡಿಸಲು ಹೋಗುವ ವೇಳೆ ಪೊಲೀಸರಿಂದ ಹಲ್ಲೆಯಾಗಿದೆ

ದಿನಸಿ ಖರೀದಿಗೆ ಹಣ ಡ್ರಾ ಮಾಡಿಕೊಂಡು ಹೋಗು ವ ವೇಳೆ ಈ ಒಂದು ಘಟನೆ ನಡೆದಿದೆ.ಹಳೇ ಹುಬ್ಬ ಳ್ಳಿಯ ದೇವರಗುಡಿಹಾಳ ಕ್ರಾಸ ಬಳಿ ಈ ಒಂದು ಘಟನೆ ನಡೆದಿದೆ.ಲಾಠಿಯಿಂದ ತೆಲೆಗೆ ಹೊಡೆದ ಪರಿ ಣಾಮ ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿ ಕ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಮಾರಣಾಂತಿಕವಾಗಿ ಗಾಯಗೊಂಡಿರುವ ಕಾರ್ಮಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.ಗಾಯಾಳು ಕಾರ್ಮಿಕನ ಸಂಬಂಧಿಕರಿಂದ ಪಿಎಸ್ ಐ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.ಅಲ್ಲದೇ ಹಲ್ಲೆಯನ್ನು ಮಾಡಿ ರುವ ಪಿಎಸ್ ಐ ವಿರುದ್ದ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಪಟ್ಟು ಹಿಡಿದಿದ್ದಾರೆ ಯುವಕನ ಸಂಬಂಧಿಕರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.