ಬೆಂಗಳೂರು –
ಹೌದು 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಕ್ರಮದ ತನಿಖೆ ಚುರುಕುಗೊಂಡಿದ್ದು ನೇಮ ಕಾತಿಯ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಕೆ.ಆರ್.ಪುರ ಸಂಚಾರ ಠಾಣೆ ಪಿಎಸ್ಐ ಸುಬ್ರಮಣಿ (35) ಅವರನ್ನು ಸಿಐಡಿ ಅಧಿಕಾರಿಗಳು ಬಂಧನ ಮಾಡಿದ್ದಾರೆ.
ಎಡಿಜಿಪಿ ಅಮ್ರಿತ್ ಪೌಲ್ ಡಿವೈಎಸ್ಪಿ ಶಾಂತ ಕುಮಾರ್ ಸೇರಿದಂತೆ 60ಕ್ಕೂ ಹೆಚ್ಚು ಆರೋಪಿ ಗಳನ್ನು ಪ್ರಕರಣದಲ್ಲಿ ಈಗಾಗಲೇ ಬಂಧಿಸ ಲಾಗಿದೆ ಪಿಎಸ್ಐ ಅಕ್ರಮ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಸುಬ್ರಮಣಿ ತಲೆಮರೆಸಿಕೊಂಡಿದ್ದರು ಬೆಂಗಳೂರಿ ನಲ್ಲಿ ಇವರನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು
ಹೆಚ್ಚಿನ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆದಿದ್ದಾರೆ.ಪೊಲೀಸ್ ನೇಮಕಾತಿ ವಿಭಾಗದ ಸಿಬ್ಬಂದಿ ಜೊತೆ ಪಿಎಸ್ಐ ಸುಬ್ರಮಣಿ ಒಡನಾಟ ಹೊಂದಿದ್ದ ಸಂಬಂಧಿಯೂ ಆಗಿದ್ದ ಅಭ್ಯರ್ಥಿ ಶಿವರಾಜ್ ಹಾಗೂ ಮನು ಕಡೆಯಿಂದ ಲಕ್ಷಾಂತರ ರೂಪಾಯಿ ಪಡೆದಿದ್ದ ಸುಬ್ರಮಣಿ ಅದನ್ನು ನೇಮಕಾತಿ ವಿಭಾಗದ ಸಿಬ್ಬಂದಿಗೆ ಕೊಟ್ಟಿದ್ದ.
ಇಬ್ಬರ ಒಎಂಆರ್ ಪ್ರತಿ ತಿದ್ದುಪಡಿ ಮಾಡಿದ್ದ ಸಿಬ್ಬಂದಿ ಅಕ್ರಮವಾಗಿ ಆಯ್ಕೆಯಾಗುವಂತೆ ಮಾಡಿದ್ದರಂತೆ.ಇನ್ನೂ ಪ್ರಕರಣದಲ್ಲಿ ಈಗಾಗಲೇ ಶಿವರಾಜ್ ಹಾಗೂ ಮನುನನ್ನು ಬಂಧಿಸಲಾಗಿದೆ. ಇವರಿಬ್ಬರು ಸುಬ್ರಮಣಿ ಹೆಸರು ಬಾಯ್ಬಿಟ್ಟಿದ್ದರು ಬಂಧನದ ಭೀತಿಯಿಂದಾಗಿ ಇವರು ಉತ್ತರ ಭಾರತದಲ್ಲಿ ಸುತ್ತಾಟ ಮಾಡಿದ್ದರು.
ಬಂಧನ ಭೀತಿಯಲ್ಲಿ ರಾಜ್ಯವನ್ನು ತೊರೆದಿದ್ದ ಪಿಎಸ್ಐ ಸುಬ್ರಮಣಿ, ಉತ್ತರ ಭಾರತದ ರಾಜ್ಯಗಳಲ್ಲಿ ಸುತ್ತಾಡುತ್ತಿದ್ದರು ಪ್ರಕರಣದ ತನಿಖೆಯ ಕಾವು ಕಡಿಮೆಯಾಗಿರಬಹುದು ಎಂದು ತಿಳಿದು ಇತ್ತೀಚೆಗಷ್ಟೇ ನಗರಕ್ಕೆ ಬಂದಿದ್ದರು ಹೀಗಾಗಿ ಇವರು ಬಂದಿರುವ ಖಚಿತ ಮಾಹಿತಿ ಸಂಗ್ರಹಿಸಿ ಇವರನ್ನು ಸಿಐಡಿ ಅಧಿಕಾರಿಗಳು ಬಂಧನ ಮಾಡಿದ್ದಾರೆ.