ವರ್ಗಾವಣೆ ವಿಘ್ನಗಳನ್ನು ದೂರ ಮಾಡೋ ವಿಘ್ನೇಶ್ವರ – ನಾಡಿನ ಶಿಕ್ಷಕರ ಪರವಾಗಿ ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾ ಧ್ಯಕ್ಷರ ಮನವಿ…..

Suddi Sante Desk

ಧಾರವಾಡ –

ಶಿಕ್ಷಕರ ವರ್ಗಾವಣೆ ವಿಚಾರ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ,ಶಿಕ್ಷಣ ಸಚಿವರು,ಸೇರಿದಂತೆ ಅವರಿ ವರನ್ನು ಕೇಳಿ ಕೇಳಿ ನಾಡಿನ ಶಿಕ್ಷಕ ಬಂಧುಗಳು ಬೇಸತ್ತಿದ್ದಾರೆ.ಅವರು ಒಂದು ಕಡೆ ಹೆಂಡತಿ ಮತ್ತೊಂದು ಕಡೆಗೆ ಮಕ್ಕಳು ಇನ್ನೊಂದು ಕಡೆಗೆ ತಂದೆ ತಾಯಿ ಮತ್ತೊಂದು ಕಡೆಗೆ ಹೀಗೆ ದಿಕ್ಕಾಪಾ ಲಾಗಿ ವರ್ಗಾವಣೆ ಸಿಗದೇ ಕರ್ತವ್ಯವನ್ನು ಮಾಡುತ್ತಿ ರುವ ಶಿಕ್ಷಕರ ಸಮಸ್ಯೆಗಳು ಶಿಕ್ಷಕರಿಗೆ ಗೊತ್ತು. ಯಾರಿಗೂ ಇಲ್ಲದ ಯಾವ ಇಲಾಖೆಗೂ ಇಲ್ಲದ ವರ್ಗಾವಣೆಯ ನೀತಿ ನಿಯಮಗಳಿಂದ ನಾಡಿನ ಶಿಕ್ಷಕರು ಬೇಸತ್ತಿದ್ದಾರೆ.ಯಾರೇಲ್ಲಾ ಬಂದು ಹೋದರು ಕೂಡಾ ವರ್ಗಾವಣೆಯ ನೀತಿ ನಿಮಯ ಗಳು ಮಾತ್ರ ಬದಲಾಗುತ್ತಿಲ್ಲ.ವರ್ಗಾವಣೆಗೆ ಸದಾ ಒಂದಿಲ್ಲೊಂದು ಕಂಟಕಗಳು ಬಂದೊಗುತ್ತಿದ್ದು ಇವೆಲ್ಲ ವಿಘ್ನಗಳು ದೂರವಾಗಲಿ ಎಂದು ಕರ್ನಾಟಕ ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾ ಧ್ಯಕ್ಷರು ಪವಾಡೆಪ್ಪ ಈಗ ಗಣಪತಿ ಮೋರೆ ಹೋಗಿ ದ್ದಾರೆ.

ಹೌದು ಸಧ್ಯ ವರ್ಗಾವಣೆಗೆ ಬಂದು ಒದಗಿರುವ ಎಲ್ಲಾ ವಿಘ್ನಗಳು ದೂರವಾಗಲಿ ಸರಾಗವಾಗಿ ಶಿಕ್ಷಕರ ವರ್ಗಾವಣೆ ನಡೆಯಲಿ ಎಂದು ಗಣಪತಿಯ ಮುಂದೆ ಕುಳಿತುಕೊಂಡು ಪ್ರಾರ್ಥನೆ ಮಾಡಿದ್ದಾರೆ. ಸಧ್ಯ ಗಣೇಶೋತ್ಸವ ಬಂದಿರುವ ಹಿನ್ನಲೆಯಲ್ಲಿ ಇವರು ಕೂಡಾ ಮನೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಪುನಸ್ಕಾರವನ್ನು ಮಾಡಿರುವ ಇವರು ಗಣಪತಿಯ ಮುಂದೆ ಪುಟ್ಟದಾದ ಮನವಿಯ ಪತ್ರವನ್ನು ಬರೆದಿಟ್ಟು ಕೈ ಮುಗಿದು ನಾಡಿನ ಶಿಕ್ಷಕರ ಪರವಾಗಿ ಗಣಪತಿಯಲ್ಲಿ ಪ್ರಾರ್ಥನೆ ಮಾಡಿ ಬೇಡಕೊಂಡರು.

ಗಣಪತಿಯೇ ವರ್ಗಾವಣೆ ವಿಘ್ನಗಳನ್ನು ದೂರ ಮಾಡೋ ವಿಘ್ನೇ ಶ್ವರ ಎಂದು ಪ್ರಾರ್ಥಿಸಿದರು.ಇದರೊಂದಿಗೆ ಗ್ರಾಮೀಣ ಶಿಕ್ಷಕರ ರಾಜ್ಯಾಧ್ಯಕ್ಷರಾಗಿ ಹೀಗೆ ತಮ್ಮ ಕರ್ತವ್ಯ ಜವಾಬ್ದಾರಿಯನ್ನು ಪವಾಡೆಪ್ಪ ಅವರು ನಿರ್ವಹಣೆ ಮಾಡಿ ಹಿರೋ ಆಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.