This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

State News

ಬಿಜೆಪಿ ಶಾಸಕಾಂಗ ಸಭೆ ಕರೆಯಲು ಒತ್ತಾಯ – ಮತ್ತೆ ಬುಗಿಲೆದ್ದಿತಾ ಕೇಸರಿ ಪಕ್ಷದಲ್ಲಿನ ಅಸಮಾಧಾನ

WhatsApp Group Join Now
Telegram Group Join Now

ಬೆಂಗಳೂರು –

ತಣ್ಣಗಾಗಿದ್ದ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಮತ್ತೆ ಆರಂಭವಾದಂತೆ ಕಂಡು ಬರುತ್ತಿದೆ. ಈ ಹಿಂದೆ ಕೆಲವರು ಶಾಸಕರು ಅಸಮಾಧಾನಗೊಂಡು ನಂತರ ಶಾಂತಿಯುತವಾಗಿದ್ದ ಕೇಸರಿ ಪಕ್ಷದಲ್ಲಿನ ಅಸಮಾಧಾನ ಈಗ ಮತ್ತೆ ಸ್ಪೋಟವಾಗುವಂತೆ ಕಂಡು ಬರುತ್ತಿದೆ.ಹೌದು ಇದಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಒತ್ತಡ ಹಾಕಿದ್ದಾರೆ ಕೆಲ ಶಾಸಕರು ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ.

ಇಂದು ವಿಧಾನಸೌಧದಲ್ಲಿ‌ ರೇಣುಕಾಚಾರ್ಯ ನೇತೃತ್ವದಲ್ಲಿ ಸಭೆ ನಡೆಸಿದ 20 ಕ್ಕೂ ಹೆಚ್ಚು ಬಿಜೆಪಿ ಶಾಸಕರು, ಶಾಸಕಾಂಗ ಪಕ್ಷದ ಸಭೆ ಕರೆಯಲು ಸಿಎಂ ಗೆ ಮನವಿ ಮಾಡಿದ್ದಾರೆ. ಇಂದು ಸಂಜೆ ಅಧಿಕೃತ ನಿವಾಸಕ್ಕೆ ಬರುವಂತೆ ಶಾಸಕರಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಗಳ ಬಗ್ಗೆ ಸಭೆಯಲ್ಲಿ ಕೆಲವು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಪಕ್ಷಕ್ಕೆ ಮುಜುಗರ ಆಗುವಂತೆ ಹೇಳಿಕೆ ನೀಡುತ್ತಿರುವ ಯತ್ನಾಳ್ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರಿಗೆ ಪತ್ರ ಬರೆಯಲು ತಿರ್ಮಾನ ಮಾಡಲಾಗಿದೆ.

ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಅನುದಾನ ಸಿಗದ ಕಾರಣ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗೆ ಹೋಗಲು ಆಗದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳಿಗೆ ಅನುದಾನವೇ ಕೊಟ್ಟಿಲ್ಲ ಎಂದು ಶಾಸಕರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಚಿವರ ಕಾರ್ಯವೈಖರಿ ಬಗ್ಗೆ ಶಾಸಕರಿಂದ ಮತ್ತೆ ಅಸಮಾಧಾನ ಕೇಳಿಬಂದಿದೆ. ಉಪ ಚುನಾವಣೆ ವಿಚಾರದ ಬಗ್ಗೆಯೂ ಚರ್ಚಿಸಲು ಶಾಸಕಾಂಗ ಸಭೆ ಕರೆಯಲು ಆಗ್ರಹಿಸಿದ್ದಾರೆ. ಸದ್ಯ ಸಿಎಂ ಇಂದು ಸಂಜೆ ಅಧಿಕೃತ ನಿವಾಸಕ್ಕೆ ಬರುವಂತೆ ಈ ಶಾಸಕರಿಗೆ ಸೂಚನೆ ನೀಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk