ಮುಂದಿನ ತಿಂಗಳು ಮದುವೆ ಆತ್ಮಹತ್ಯೆ ಮಾಡಿಕೊಂಡ ರಿತೇಶ್ ಧಾರವಾಡದಲ್ಲಿ ಸಾವಿಗೆ ಶರಣಾದ ರಿತೇಶ್ ಕಾಳೆ……

Suddi Sante Desk

ಧಾರವಾಡ –

ಯುವಕನೊಬ್ಬ ಮನೆಯಲ್ಲಿಯೇ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಕಳ್ಳಿ ಓಣಿ ಯಲ್ಲಿ ಈ ಒಂದು ಘಟನೆ ನಡೆದಿದೆ

ಕಳ್ಳಿ ಓಣಿಯ ರಿತೇಶ್ ಕಾಳೆ ಆತ್ಮಹತ್ಯೆ ಮಾಡಿಕೊಂ ಡ ಯುವಕನಾಗಿದ್ದಾನೆ. ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

ಕೆಲ ವಾಹನಗಳನ್ನು ಇಟ್ಟುಕೊಂಡಿದ್ದ ರಿತೇಶ್ ಚಾಲಕನಾಗಿದ್ದನು ಅತಿಯಾಗಿ ಸಾಲವನ್ನು ಮಾಡಿ ಕೊಂಡಿದ್ದು ಹೀಗಾಗಿ ಇದರಿಂದ ಬೇಸತ್ತ ಇವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಇನ್ನೂ ಮುಂದಿನ ತಿಂಗಳು ಮದುವೆ ದಿನಾಂಕ ಪೈನಲ್ ಮಾಡಲಾಗಿತ್ತು ಇವೆಲ್ಲದರ ನಡುವೆ ಈಗ ರಿತೇಶ್ ಯಾಕೇ ಹೀಗೆ ಮಾಡಿಕೊಂಡ ಎಂಬ ವಿಚಾರ ಕುರಿತು ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.