75ನೇ ಅಮೃತ ಮಹೋತ್ಸವ ಕ್ಕೆ 75 ಕಿಲೋಮೀಟರ್ ಪಾದಯಾತ್ರೆ ಆರಂಭ ಮಾಡಿದ ಸಂತೋಷ ಲಾಡ್ – ಕಲಘಟಗಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಪಾದಯಾತ್ರೆ ಹೆಜ್ಜೆ ಹಾರುತ್ತಿರುವ ಜನರು…..

Suddi Sante Desk

ಧಾರವಾಡ –

೭೫ ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಧಾರವಾಡದ ಕಲಘಟಗಿ ಯಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಪಾದಯಾತ್ರೆ ಆರಂಭ ಮಾಡಿದ್ದಾರೆ.ಹೌದು ಕ್ಷೇತ್ರದಲ್ಲಿ 75 ಕಿಲೋಮೀಟರ್ ಪಾದಯಾತ್ರೆ ಯನ್ನು ಇಂದಿನಿಂದ ಆರಂಭ ಮಾಡಿದ್ದು ಮೊದಲನೆಯ ದಿನ ಅಭೂತಪೂರ್ವ ಬೆಂಬಲದೊಂದಿಗೆ ಯಶಸ್ಸು ಕಂಡು ಬಂದಿತು.

ಕ್ಷೇತ್ರದಲ್ಲಿ ೭೫ ಕಿಮೀ ಪಾದಯಾತ್ರೆ ಹಮ್ಮಿಕೊಂಡಿರುವ ಮಾಜಿ ಸಚಿವ ಸಂತೋಷ ಲಾಡ್ ಇಂದಿನಿಂದ ಆರಂಭ ವನ್ನು ಮಾಡಿದ್ದಾರೆ.

ಮಾಜಿ ಸಚಿವ ಸಂತೋಷ ಲಾಡ್ ಅವರಿಂದ ಈ ಒಂದು ಪಾದಯಾತ್ರೆ ನಡೆಯುತ್ತಿದ್ದು ಕಲಘಟಗಿ ತಾಲೂಕಿನಾ ದ್ಯಂತ ಪಾದಯಾತ್ರೆ ಜೋರಾಗಿ ಕಂಡು ಬರುತ್ತಿದೆ.

ಇಂದು ಸೂರಶೆಟ್ಟಿಕೊಪ್ಪ ಅಕ್ಕಪಕ್ಕದ ಹಳ್ಳಿಗಳಲ್ಲಿ ಈ ಒಂದು ಪಾದಯಾತ್ರೆ ಸಾಗಿತು.ಕಳೆದ ನಾಲ್ಕು ದಿನದಿಂದ ಹಮ್ಮಿಕೊಂಡ ಅಮೃತ್ ಮಹೋತ್ಸವ ನಡಿಗೆ.ಈಗಾಗಲೇ ೬೫ ಕಿಮೀ ಪೂರೈಸಿದ್ದಾರೆ ಮಾಜಿ ಸಚಿವರ ನೇತ್ರತ್ವದಲ್ಲಿನ ಈ ಒಂದು ಪಾದಯಾತ್ರೆ.

ಮಾಜಿ ಸಚಿವ ಸಂತೋಷ್ ಲಾಡ್ ಗೆ ಅನೇಕ ಕಾಂಗ್ರೆಸ್ ನಾಯಕರಿಂದ ಸಾಥ್ ನೀಡಿದ್ದು ಕ್ಷೇತ್ರದ ಜನರು ಮಕ್ಕಳು ಸೇರಿದಂತೆ ಹಲವರು ಸಾಥ್ ನೀಡಿದ್ದು ಅಪಾರವಾದ ಬೆಂಬಲವನ್ನು ನೀಡಿದ್ದಾರೆ.

ಇಂದು ಸೂರಶೆಟ್ಟಿಕೊಪ್ಪ ಅಕ್ಕಪಕ್ಕದ ಹಳ್ಳಿಗಳಲ್ಲಿ ಪಾದಯಾತ್ರೆ ಸಾಗಿತು‌.ಕಳೆದ ನಾಲ್ಕು ದಿನದಿಂದ ಹಮ್ಮಿ ಕೊಂಡ ಅಮೃತ್ ಮಹೋತ್ಸವ ನಡಿಗೆ ಹಿನ್ನೆಲೆಯಲ್ಲಿ ಈ ಒಂದು ಪಾದಯಾತ್ರೆ ನಡೆಯುತ್ತಿದ್ದು ಜನ ಬೆಂಬಲ ಕಂಡು ಬರುತ್ತಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.